Sunday, May 31, 2009

Reader Writes on RKN's "Painter of Signs"

Mr. HR Nagesha Rao was an ardent fan of RK Narayan. And ofcourse he has been reading Illustrated Weekly of India without fail. I had the privilege of bringing home the magazines like Weekly, Femina, Filmfare, Shankar’s Weekly, Blitz and Current from M/s. Nandana News Agency, Opp. To NMH in Vishveswarapura, a walkable distance from Journalists’ Colony. In addition to these magazines, I remember to have seen subscriber’s copies of Readers’ Digest, Mirror and Hi being received at home by post. He used to get the books of his choice written by Khushwant Singh, Manohar Mulgaonkar, RK Narayan etal through VPP. During 1976 he shoots an inland letter to the Editor of the Weekly about his disappointments after reading a serialized novel of RKN.

To
The Editor
“Illustrated Weekly of India”
“READERS’ WRITE”
Bombay –1

Dear Sir,

Re: PAINTER OF SIGNS

What an abrupt end to an absorbing, interesting and witty story by Sri R.K.Narayan? Were you not prepared to provide space for the serial for some more weeks or was the author afraid that if Raman and Daisy were made to live together, the heroine of family planning might herself end with a babe in her arms! Or they would have to seek merely divorce on account of their incompatible temperaments and possible encounters on their way, the “brave” Daisy turned out to be an escapist – infirm in her decisions and designs and an inhuman being quite unconcerned with the fate of the person who sacrificed his chastity and also has deserted his aunt for her sake. We should only hope that in her next escapade in Nilgiris, she will not entice some innocent hermit there and spoil his fruits of penance.
My heartfelt sympathies to the “Painter of Signs” who succumbed to the wiles of a slogan shooter and was finally left in a lurch – as “athO bhrashTa, tathO bhrashTa! This should not have happened to a novel penned by an illustrious Narayan!

HR Nagesha Rao

06/10/1976

Saturday, May 30, 2009


The First Attempt

While studying Second Form at Government High School, Tumkur, the poet in HRN made an appearance for the first time in 1941. Through the design of the cover page of the handwritten publication ‘The First Attempt’ in English, HRN has exhibited the talents of an artist and a page composer. The entire collection of poems, is beautifully crafted in hand does contain some cartoons too!

(Nagesha Rao sitting in the first row, second from the right extreme end)

'The Last Word' - with Mr.Nagesha Rao

- Sachidananda Murthy
Resident Editor, ‘The Week’

As a young reporter of the Indian Express in Bangalore, I would try to catch the last bus from Shivajinagar to Jayanagar 9th Block. The route no. 20 bus left at 10.30 PM and I would hop in, with a cloth bag full of books on my shoulder. I had a habit of reading five or six books at a time, since there was a deadline to return them to the libraries. If I missed the bus, then I had to rely on the ancient office van, which would drop me beyond midnight at Jayangar 4th block, from where I would walk two kms. home, dodging stray policemen and dogs. Hence the last bus was a luxury, compared to the van. In the bus I would also read a book for two stops. I would notice a small built gentleman in khadi getting in and sit in a disciplined upright position. If he did not get a seat – the bus would get crowded on some days- he would be very embarrassed when one of the younger passengers offered him a seat. But he would always have a quick glance at what I was reading.

A few weeks later, S.Devanath, the effervescent sports chief of Samyukta Karnataka had got in at the same stop and we were discussing assignments, sporting events, trade unionism and his latest brush with editorial authorities. Suddenly he asked whether I knew his News Editor Mr.Nagesha Rao. He acknowledged me with a slight smile and said he had noticed my byline in the Express. Then Devanath took over. But there were subsequent journeys when the spirited Devanath would be missing. Then Mr. Nagesha Rao would speak to me about the day’s developments, the important news items in the morning’s papers and also on the books I was reading. He would not speak much about his work, and I had to virtually drag the information out of him. He was an astute journalist who had a command over facts. Yet he would never brag that he knew better than others. If he liked a report, he would ask “how many sweets you ate” (esshtu sihi tindiri ivattu). But if there was a mistake, in a hesitant manner, he would ask whether I had contributed a particular fact or was it the desk. Puffing up in importance, if I claimed authorship, he would say I must have been in a hurry as the actual fact was different from what I had written. He would also spot out the slang or inappropriate words. He was a skeptic when it came to the sensational claims of the media. “So today you have changed the world”, Mr. Nagesha Rao would ask on a day the Indian Express would have broken a big story all over the front page, which happened almost every day once the Emergency was lifted in 1977.
I would be full of enthusiasm saying so and so minister or official would have to go. Then he would say you would need six such reports if the well-entrenched vested interests had to be shaken and uprooted. But if there was a breach of privacy, he would gently chide saying jorunalists should not cross the threshold of the living room. Yet he an ear for spicy news and sharp insight into troubled life of politicians and other newsmakers.

The talk would continue till we got off the bus and parted at the corner. But it would not be the time for Mr. Nagesha Rao, who absorbed vast quantities of information and stored it in his neatly arranged brain. He would ask me about the films I had seen. Those days, when I got a day’s off, I would try to see at least two films, meet a dozen friends and keep bustling. I thought he was making gentle fun of me by asking details of the English movies like who wrote the story, how the plot could have been different, what are the other major movies of the star. But after a few weeks, I realised Mr. Nagesha Rao was a movie buff, who would invariably on his off day see one new release in the Cantonment area. Then our discussions on films were based on mutual likes and dislikes. Though his favourites were classics, based on great novels, the journalist in him enjoyed every film, which told a story grippingly. His knowledge of classical and western music was considerable, though I have never heard him hum a tune. Such was his sense of propriety. Similarly he was never garrulous. When several people joined a discussion, he would maintain a discreet silence and spoke only when there was a demand on Mr. Nagesha Rao to give his opinion.

He had a fine sense of balance between report and headline, photograph and caption. He was good at word play, but did not like excessive games with rhyming words. “If your story is good, why should you unnecessarily garnish with excessive style,” he would ask.

Our discussions continued for a decade off and on, as my journeys on Route no.20 came down after I left the Indian Express and joined The Week. But instead I would go to his office and have a chat. After some months of our acquaintance, I used to ask him why he was not trying for a better newspaper, than stick on to Samyukta Karnataka, which was going through many vicissitudes. He would smile and ask “is the news different in those papers? Only later I came to know that he had turned down offers with increased salary from two other Kannada newspapers.

Mr. Nagesha Rao never turned his face away from the world. But he watched the world with a sense of attachment to what was happening, but also with a neutral detachment necessary for an observer. Till the end of his life, he took keen interest in journalism and what pleased me was that he remained a regular reader of The Week since the first issue. Often he would express his anguish that I was not writing enough in the magazine. He would gently admonish me saying, “You must have a big file of all those reports which are not published by your editor”. He was a perceptive commentator of my column Last Word, but I cannot forget the Last Word of the day from Mr. Nagesha Rao, uttered almost every night in Jayanagar 9th Block bus stop.

After a long time in November 2003, I had gone to Rex cinema in Brigade Road, taking my adolescent sons. As we crossed Cash Pharmacy, I remembered how I would have discussed the plot of the movie with Mr. Nagesha Rao, knowing well that he would have seen the movie most probably.

(This article is originally published in the book ‘Suddijeevi – Nagesharao’, Edited by Jayarama Adiga and Haldodderi Sudhindra Published by the Bangalore Press Club in memory of HRN in March 2006. HRN died on 3rd August 2003 at Bangalore)

Sunday, May 24, 2009

ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು!

[ದಿನಾಂಕ 29/4/60ರಂದು ಹೆಚ್.ಆರ್.ನಾಗೇಶರಾವ್ ಅವರು ಸ್ವೀಕರಿಸಿದ ಈ ಪಗೋ ಪತ್ರದಲ್ಲಿ ಮಂಗಳೂರಿನ ಪ್ರಿಕ್ಲಿ ಹೀಟು - ಬೆಂಗಳೂರಿನ ಥಂಡಿ ಹವಾ, ಎರಡೂ ಕಡೆಯ ಪತ್ರಿಕೋದ್ಯೋಗಿಗಳ ಅಗ್ದಿ ಭಯಂಕರ ಸ್ಥಿತಿ, ಭವಿಷ್ಯತ್ತಿನ ಬಗ್ಗೆ ಚಿಂತನೆ .. ಹೀಗೆ ನಾಲ್ಕು ದಶಕಗಳ ಹಿಂದಿನ journo daysಗೆ ನಿಮ್ಮನ್ನು ಕರೆದೊಯ್ಯುತ್ತದೆ.]

ಮಂಗಳೂರು 26/4/60

ಗೆ ನಾಗೇಶರಾಯರಿಗೇ

ಗೆ ಪಗೋರಿಗೆಯ ನಮಸ್ತೆ - ಉರ್ಫ್ ವಂದನೆಗಳು.

ಹಲವಾರು ಯೋಜನೆಗಳು ವಿಫಲವಾದ ನಂತರ ಬಂದ ನಿಮ್ಮ ಪತ್ರಕ್ಕೆ ಈ ತಿಂಗಳು ಮುಗಿಯುವ ಮೊದಲೇ ಉತ್ತರ ಬರೆಯಬೇಕು - ಅದೂ ಈ ದಿನದ ಕಾರ್ಯಕ್ರಮದಲ್ಲೆ ಮುಗಿಯಬೇಕೆಂಬ ದೃಢ ನಿರ್ಧಾರ ಮಾಡಿ ಆರಂಭಿಸಿದ್ದೇನೆ: ರಾತ್ರಿ ೧೦:೩೦ರ ಹೊತ್ತಿಗೆ. ಮನೆ ಸಮೀಪವಾದುದರಿಂದ ಅನುಕೂಲ (+ ಅನನುಕೂಲ) ಇರುವ ಕಾರಣ ತಿರುಗಿ ಕಾರ್ಯಾಲಯಕ್ಕೇ ಬಂದು ಬರೆಯುವ ಮನ ಮಾಡಿದ್ದೇನೆ. ಸರಾಗವಾಗಿ ಬರೆಯಲು ink flow ಸರಿಯಾಗಿರುವ ಒಂದು Parker pen ಕೂಡಾ borrow ಮಾಡಿದ್ದೇನೆ (ಆದರಿಂದಾಗಿಯೇ ಮಸಿ ಹಸಿರಾಗೋಕ್‍ಹತ್ತಿದೆ!) ಆದುದರಿಂದ - ಆಗಾಗ ಸಹ+ನಿರುದ್ಯೋಗಿಗಳು ಬಂದು ತೊಂದರೆ ಕೊಡುತ್ತಿದ್ದರೂ ಮುಂದುವರಿಸುವ ಪ್ರಯತ್ನ ಸಾಗಿದೆ.

ದಿನ ಪಾಳಿಯಾದರೂ ರಾತ್ರಿ ಬಂದು ಬರೆಯಲು ತಕ್ಕ ಸ್ವಾತಂತ್ರ್ಯ ಸಿಕ್ಕಿದೆ. ಕುಮಾರ ಕಂಠೀರವನನ್ನೂ, ಅವನಮ್ಮನನ್ನೂ ಒಟ್ಟಾಗಿ ಬೆಂಗಳೂರಿಗೆ ‘ಥಂಡಿ’ ಹವಾ ತಿನ್ನಲು - 2 ತಿಂಗಳ ಕಾಲ ರಜಾ ಕೊಟ್ಟು ಕಳುಹಿಸಿದ್ದೇನೆ. ಆದುದರಿಂದ ಮನೆಗೀಗ ನಾನೇ ಸರ್ವಾಧಿಕಾರಿ. ಬೀಗ ಜಡಿದು ಬಂದಿರುವ ಕಾರಣ ಎಷ್ಟು ಹೊತ್ತು ಬೇಕಾದರೂ ಬರೆಯಬಹುದು - ಬರೆದು ಮುಗಿಸಬಹುದು.

ಆದ್ದರಿಂದ ಉಭಯ ಕುಶಲೋಪರಿ ಸಾಂಪ್ರತ -

ನಿಮ್ಮ ಪ್ರತಿಯೊಂದು ಪತ್ರದಲ್ಲೂ ಒಂದೊಂದು Bomb, shell ಮಾಡುತ್ತೀರಿ - ನಿಮಗಾದರೂ ಹೇಗೆ ಸಿಗುತ್ತದೆ ಅಂತಹ ಸುದ್ದಿ ಎಂದು ಆಶ್ಚರ್ಯ ಪಡುವ ಹಾಗೆ. ನಮ್ಮದೇನೂ ಇಲ್ಲ ... ಇದ್ದರೂ ಅದೇ double D (Dull & Drab) ಎನ್ನುವ ಹಾಗಿದೆ.

ನಿಮ್ಮಲ್ಲಾದ ಅಗ್ದಿ ಬದಲಾವಣೆ (ಸ್ವಲ್ಪ ಮಟ್ಟಿಗಾದರೂ) ಕಂಡು ಬಂದಿದೆ. ತಪ್ಪುಗಳ ವಿಚಾರ ಮಾತ್ರ ನಾನು ಗಮನಿಸಹೋಗಿಲ್ಲ - ಏಕೆಂದರೆ ನಾವೂ ತಪ್ಪುಗಳಲ್ಲಿ ಕಡಿಮೆಯೇನೂ ಅಲ್ಲ (ಬೆನ್ನು ತಟ್ಟಿಕೊಳ್ಳಲೆ!) ಅಂದರೆ, ಆದ ಕಲಹ ಮತ್ತು ಕೊನೆಯ truce‍ನ ವಿಚಾರ ಮಾತ್ರ ಒಂದಷ್ಟು ಯೋಚನೆ ತರುವಂತಹದು. ‘ವಿಕೋಪಕ್ಕೆ ತಿರುಗದಂತೆ’ ಆಗಲಿ ಎಂದಷ್ಟು ಮಾತ್ರ ಹಾರೈಸುತ್ತೇನೆ.

ನಿಮ್ಮ ಕಾರ್ಯಾಲಯದಲ್ಲಾದ ಆಸನವ್ಯವಸ್ಥೆ ಬದಲಾವಣೆ ಗಮನಾರ್ಹ. ನಮ್ಮಲ್ಲಿ ಆ ರೀತಿಯ ಚಿತ್ರ ಬಿಡಿಸಬೇಕೆಂದರೆ ಹೆಚ್ಚಿನ ಕೆಲಸವೇನೂ ಇಲ್ಲ. ಅತಿ ಸುಲಭ. Administration & Ads ಒಂದು ಫರ್ಲಾಂಗ್ ದೂರ. ಕಟ್ಟಡ, ನಿವೇಶನ ಎಲ್ಲವೂ ಬೇರೆ. ಸಂಪರ್ಕಕ್ಕೆ ITIಯವರ PAX (25 Lines) ಮಾತ್ರವೇ. ನಾವಿರುವುದು ಹೀಗೆ: (ಪಗೋ ಒಂದು ಚಿತ್ರ ಬಿಡಿಸಿಟ್ಟಿದ್ದಾರೆ, ನಂತರ ಕ್ಲಿಕ್ ಮಾಡಿ ಸೇರಿಸುತ್ತೇನೆ - ಸಂ.)

ನಮ್ಮ ಕ್ಲಾಸ್‍ರೂಂದಲ್ಲಿ M.V.Hegde (Leader Writer - cum (namesake) Asst. Editor) ಒಬ್ಬರೇ ಮಾಸ್ತರರು. ನಮಗೂ ಅವರಿಗೂ ನಡುವೆ ಒಂದು file rack ಇದೆ. ಉಳಿದುದೆಲ್ಲಾ ಒಬ್ಬರ ಬೆನ್ನನ್ನು ಇನ್ನೊಬ್ಬರು ನೋಡುವ ವಿಚಾರ. (ಸ್ಫೂರ್ತಿ ಬರುವುದಕ್ಕೆ ಒಳ್ಳೆಯದು!) ಎಂದಾದರೊಮ್ಮೆ (ನಾನು ಮಂಗಳೂರಿನಲ್ಲಿರುವಾಗಲೇ) ಬಂದೇ ಬರುತ್ತೀರಲ್ಲ, ಆಗ ಕಾಣುವಿರಂತೆ ಪ್ರತ್ಯಕ್ಷವಾಗಿ. ಇಲ್ಲಿಗೆ ಪ್ರವೇಶಿಸುವುದೂ ಅಷ್ಟು ಸುಲಭವಲ್ಲ, ಹೊಸಬರಿಗೆ ದಾರಿ ತಪ್ಪುವ ರೀತಿ. Kudva's empire‍ನ ಹಲವಾರು enterprise‍ಗಳನ್ನು ದಾಟಿಕೊಂಡು ಬರಬೇಕು. ನಾವಾಯಿತು, ನಮ್ಮ ಮೂಲೆಯಾಯಿತು. ಹೊರಜಗತ್ತು ನಮಗೆ ಕಾಣುವುದೆಂದರೆ Lorry, Car ಇತ್ಯಾದಿಗಳ ಸಂಗ್ರಹ ಮಾತ್ರ.

RBಯವರಿಗೂ (‘ಗ್ರಾಮಾಯಣ’ದ ಲೇಖಕ ರಾವಬಹಾದ್ದೂರ ಅರ್ಥಾತ್ ಆರ್.ಬಿ.ಕುಲಕರ್ಣಿ ಸಂಕದ ಸಹಾಯಕ ಸಂಪಾದಕರಾಗಿದ್ದರು. -ಸಂ.) - ಸಂಯುಕ್ತ ಅವರಿಗೂ ಪ್ರಶಸ್ತಿ-ಪಾರಿತೋಷಕ ಸಿಕ್ಕಿದ ವಿಚಾರ ಪ್ರಜಾವಾಣಿಯಲ್ಲಿ ಓದಿದ್ದೆ.

**** ರು (ಹೆಸರನ್ನು edit ಮಾಡಲಾಗಿದೆ. -ಸಂ.) ಕಚೇರಿ ಬಿಟ್ಟ ವಿಚಾರ ಹೇಳಿರಲಿಲ್ಲ. ಈಗ ಹೇಳಿದರೆ - ಸುದ್ದಿ ನಿರೀಕ್ಷಿತ (ಬೆಣ್ಣೆಯವರು ಬಾಳುವುದಿಲ್ಲ ಎಂದು ನಿಮ್ಮಲ್ಲೇ ಒಂದು ಬಾರಿ ಹೇಳಿದ ನೆನಪಿದೆ - ಆದುದರಿಂದ credit ಪಡೆಯಬಹುದು ತಾನೆ?) ಈ ನಡುವೆ ‘ಕಲ್ಲೆ ನಾರಾಯಣರಾಯರು’ ನಿಮ್ಮಲ್ಲೆ ಸೇರಿಕೊಂಡುದು ನಿಜವಾಗಿಯೂ ಆಶ್ಚರ್ಯವೆನಿಸಿದೆ. ಹೂಂ .... ಯಾವ ಕೆರೆಗೆ ಯಾವ ಕಪ್ಪೆ ಬರಲಿದೆಯೊ ಎಂದುಕೊಳ್ಳುವ ಹಾಗಾಯಿತು.

ಉಳಿದ ಸಣ್ಣ-ಪುಟ್ಟ ಬದಲಾವಣೆಗಳ ಅಷ್ಟು ಗಮನಾರ್ಹವಲ್ಲ ಎನ್ನಬೇಕೆಂಬ ಆಸೆ. ಆದರೆ, ವಾಸ್ತವವಾಗಿ ಅವು ಗಮನಾರ್ಹವಾದ ಕಾರಣ, ಗಮನಿಸಿಯೇ ತೀರಬೇಕಾಗಿದೆ. Artist ಬಗ್ಗೆ ಹೆಚ್ಚು ಕಮೆಂಟಿಸುವಂತಿಲ್ಲ. **** ರಿಗೆ (ಹೆಸರನ್ನು edit ಮಾಡಲಾಗಿದೆ. -ಸಂ.) ಅಷ್ಟೊಂದು ಸ್ವಾತಂತ್ರ್ಯ ಕೊಟ್ಟುದು ಮಾತ್ರ ಭಯೋತ್ಪಾದಕ - ಇಲ್ಲಿ ಅವರು mischief maker ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. (ಅವರ ಹೆಸರಿನ ವಿಶೇಷ Box ರಚಿಸಬೇಕೆಂದು World Culture article ಬಂದಾಗಲೇ ಅಂದುಕೊಂಡಿದ್ದೆ - ಏನೋ ಪ್ರಾಶಸ್ತ್ಯ ಸಿಕ್ಕಿರಬೇಕೆಂದು). ಈ ಪತ್ರ ನಿಮ್ಮ ಕೈಸೇರಿ ನೀವು ಉತ್ತರ ಬರೆಯುವ ಹೊತ್ತಿಗಾದರೂ 3 shift‍ಗಳಾಗಲಿ ಎಂದು ಹಾರೈಸುತ್ತೇನೆ (ನಮ್ಮಲ್ಲಿನ ಎರಡು 8 ಘಂಟೆ shift‍ಗಳ ಹೊಟ್ಟೆಯುರಿಯೊಂದಿಗೆ!)

ಕುಮಾರ ವೆಂಕಣ್ಣ ‘ಜನವಾಣಿ’ ಸೇರಿಲ್ಲವಾದರೆ ಬೇರೆ ಯಾರಾದರೂ ಸೇರಿದ್ದಾರೆಯೆ? Typical `ಜನವಾಣಿ’ Headings ಕಾಣುವುದಿಲ್ಲವಲ್ಲ. MSRIರಿಗೆ (ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ - ತಾಯಿನಾಡು ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು - ಸಂ.) ಸ್ಥಾನ ದೊರೆತುದು ಸಂತೋಷ (ಎಂದಾದರೂ ಒಂದು ಬಾರಿ ಮನೆ ಎದುರಿಂದ ಹಾದು ಹೋದರೆ ಒಂದು ಸಣ್ಣ ನಮಸ್ಕಾರ ಹೇಳಿ - ಈಗಲೂ ಪತ್ರಿಕೋದ್ಯೋಗಿಗಳ ವಸಾಹತಿನಲ್ಲೇ ಇದ್ದಾರಷ್ಟೆ!) ‘ನಾರದ ಉವಾಚ’ (ನಾಗೇಶರಾಯರು ತಾಯಿನಾಡು ಪತ್ರಿಕೆಯಲ್ಲಿ ಬರೆಯುತ್ತಿದ್ದ ನಿತ್ಯ ಟೀಕಾಂಕಣ. ಪ್ರಜಾವಾಣಿಯ ಛೂಬಾಣದಂತೆ. - ಸಂ.)- ಕೆಲವು ಬಾರಿ ಇಸ್ಪೀಟಾಟವೇ ಆಗಿದೆ ಎನಿಸುತ್ತಿದೆ.

ನಮ್ಮಲ್ಲಿ ಹರಟೆಗಾರರಿದ್ದಾರಾದರೆ, ಅವರಿಗೆ ಅಹ್ವಾನ ಕೊಡಲೆಂದು ಮುಂದೆ ಬಂದವರ (ಅರ್ಥಾತ್ ಪ್ರಕಾಶಕರ) ಯೋಜನೆ ಹರಟೆಗಳದು. ಆದರೆ, ಇದುವರೆಗೆ ಯಾರೂ piece work basis‍ನ ಹರಟೆಗಾರರು ದೊರೆಯದೆ ಅದನ್ನು ಅರ್ಥಗರ್ಭಿತದ MVH ಅವರೇ ತೂಗಿಸಿಕೊಂಡು ಹೋಗುತ್ತಿದ್ದಾರೆ. ಒಂದೆರಡು ಬಾರಿ yours trulyಗೂ invitation ಬಂತು. ಆದರೆ, ಈಗಾಗಲೇ ದೊರೆತ volume ಸಾಕು ಎಂಬ ಸುಪ್ತ ಕಾರಣಕ್ಕಾಗಿ offer decline ಮಾಡಿದೆ.

"ಕಳೆದ ವರ್ಷ ....." ಬೇಡವಾಯಿತು. ಕಿವಿಚುಚ್ಚುವವರ (ಅವರ ದೊಡ್ಡದೊಂದು ತಂಡವೇ ಇದೇ ನಮ್ಮಲ್ಲಿ ... ಪುಣ್ಯಕ್ಕೆ ಅವರಾರೂ Editorial‍ನವರಲ್ಲ. ಹೊರಗಿನವರು ಅಷ್ಟೇ ಸಮಾಧಾನ!) ಪ್ರಭಾವದಿಂದಾಗಿ ಅದು ಬೇಡ ಬೇರೇನಾದರೂ ಮಾಡಿ ... ಎಂಬ ಸುಗ್ರೀವಾಜ್ಞೆ ಹೊರಟ ಕಾರಣವೇ ‘ಹರಟೆ’ಗಳ ಪ್ರವೇಶವಾದುದು. ಈಗಂತೂ ಸಂಕ್ಷಿಪ್ತ ವಾರ್ತಾಸಾರ ಬಿಟ್ಟರೆ ಉಳಿದ ವಿಚಾರಗಳಲ್ಲಿ Times of Indiaದ Leader Page ಆಗಿದೆ. ನೋಡುವಾಗ ಒಂದು ಪೆಟ್ಟಿಗೆಗಳ stack‍ನ ಹಾಗೆ ಕಾಣುತ್ತದೆ. ಓದಲು ಏನಿದೆಯೋ - ಬೇರೆಯವರೇ ಹೇಳಬೇಕು.

ಅರ್ಥಗರ್ಭಿತವನ್ನು ಲೈಕಿಸುವ ವಾರ್ತೆಗಿಂತಲೂ ಹೆಚ್ಚಾಗಿ ನನ್ನ ಪತ್ರವ್ಯವಹಾರವನ್ನು ಖಾ. ರವರು (ಖಾದ್ರಿ ಶಾಮಣ್ಣ ಸಂ.ಕ.ದ ಸುದ್ದಿ ಸಂಪಾದಕರಾಗಿದ್ದರು. - ಸಂ.) ಮೆಚ್ಚುತ್ತಾರೆ ಎಂದು ತಿಳಿದು ನನಗೆ ತುಂಬಾ ಮೆಚ್ಚುಗೆಯಾಯಿತು. ದಿನಕ್ಕೆ average ಮೂರು ಪತ್ರಗಳನ್ನು ದೃಷ್ಟಿಸುವ ಕಾರಣ ಮೆಚ್ಚುಗೆಯಾಗದೆ ಇರುತ್ತದೆಯೆ? ಸ್ಟಾಂಪಿಲ್ಲದ ಅರ್ಜಿಗಳಲ್ಲಿ ಮುಕ್ಕಾಲಂಶ WPB ದಾರಿ ಕಾಣುವುವು. ಆದುದರಿಂದ ದಿನಕ್ಕೆ ಒಂದು ಕಾಲಂ (ಇರಲೇ ಬೇಕು ಎಂಬ Order Standing ಬೇರೆ.) ಪತ್ರಗಳನ್ನು ಮುಂಜಾನೆ ಬಂದ ಹಾಗೆಯೇ ನೋಡಬೇಕು. ಕೊಡುತ್ತೇನೆ, ಮೂಗಿನಲ್ಲಿ ಅಳುತ್ತಾ!

ಸೂರ್ಯನಾರಾಯಣರ ಪೂರ್ವಜನ್ಮ ಫಲ - ನಿಜವಾಗಿಯೂ ಅದೇ. ಏನಾಗಿ ಬಿಟ್ಟರೊ ... ನಾನಾಗಿದ್ದರೆ ಖಂಡಿತವಾಗಿಯೂ ಬಿಡುತ್ತಿರಲಿಲ್ಲ. ಆದರೆ ನಾನು ಹಲಿಂಸೂ ಅಲ್ಲವಲ್ಲ!

VTR ಶೆಟ್ಟಿ (ಪ್ರಸಿದ್ಧ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ತಾಯಿನಾಡುವಿನಲ್ಲಿ ಆರಂಭಿಸಿದರು - ಸಂ.)ಬಹುಶಃ ಮದುವೆಯಾದ ನಂತರ ಮುಂಬಯಿಗೆ ಹೋಗಿರಬೇಕು - *********** [Edit ಮಾಡಲಾಗಿದೆ. - ಸಂ.] ಅಲ್ಲಿ ನಿಂತರೆ ತಾನೆ! ಆನಂತರ ನೋಡೋಣವಂತೆ. (Digressing from the point ಒಂದು gossip item. *************** [Edit ಮಾಡಲಾಗಿದೆ. - ಸಂ.])

ಸತ್ಯನಿಂದ (ಕನ್ನಡಪ್ರಭದ ಕೆ.ಸತ್ಯನಾರಾಯಣ ತಾಯಿನಾಡುವಿನಲ್ಲಿ ಪಗೋ ಮತ್ತು ನಾಗೇಶರಾಯರ ಸಹೋದ್ಯೋಗಿಯಾಗಿದ್ದರು. - ಸಂ.) ಒಂದು ತಿಂಗಳ ಹಿಂದೆ ಒಂದು ಕಾರ್ಡು ಬಂದಿತ್ತು. ಗೋಯೆಂಕಾ ಬಗ್ಗೆ rumour ಕೂಡಾ ತಿಳಿದು ಬಂದಿತ್ತು. (ಇದಕ್ಕೆ connecting matter ಮತ್ತು ಅದರ Background material ಆನಂತರ special items ಆಗಿ reopen ಮಾಡುತ್ತೇನೆ.)

ಕಂಪೋಜಿಟರರ ಪೇಚಾಟ ನಮಗೂ ಬಿಟ್ಟಿಲ್ಲ. ಅದೊಂದು ಕಥೆ ಮುಂದಿನ ಪುಟಗಳಲ್ಲಿ ಬರಲಿದೆ.

"ದಿನಕಳೆದಂತೆ ಮುದಿ ಮನೋಭಾವ" ... ಹಾಂ! ಇಷ್ಟು ಬೇಗನೆ! ಸುಧಾರಿಸಿಕೊಳ್ಳಿ ಸ್ವಾಮೀ. ಈ ‘ನೆಮ್ಮದಿ’ಯ ವಿಚಾರ ಚರ್ಚಿಸುವಷ್ಟು freedom ನನಗಿನ್ನೂ ದೊರಕಿಲ್ಲ ... ಆದುದರಿಂದ ಈಗ ಚರ್ಚಿಸುವ ಸ್ವಾತಂತ್ರ್ಯವನ್ನೂ ನಾನು ವಹಿಸುವುದಿಲ್ಲ ... ಅಂದರೂ, ಆ ಕಾಲವೂ ಒಂದು ಬರಬಹುದು ಎಂಬ ಆಸೆಯನ್ನಷ್ಟೇ - ನನ್ನ ಪರಿಚಯವೆಂದರೆ slow poisioningನ ದಾರಿ ಎಂಬ ಕೀರ್ತಿ ನನಗಿರುವ ಕಾರಣ - ಇರಿಸಿಕೊಂಡಿದ್ದೇನೆ. ಆಗ ನನ್ನದೂ ಒಂದಷ್ಟು ಕಟ್ಟೆಪುರಾಣ ಕೇಳುವಿರಂತೆ.

ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು. ನಮ್ಮ ಆಫೀಸಿನಲ್ಲಿ (ಸದ್ಯಕ್ಕೆ ನಾನೊಬ್ಬ ಮಾತ್ರ) ಬನೀನುಧಾರಿಯಾಗಿ ಕೆಲಸ ಮಾಡುವ ಹಾಗಿದ್ದೇನೆ. ಉಳಿದವರಿಗೆ ಅಭ್ಯಾಸವಾಗಿದೆಯೊ ಏನೊ! ಅದಕ್ಕೇ ಕುಮಾರ ಕಂಠನ ಒದ್ದಾಟ ನೋಡಲಾಗದೆ ಅವನನ್ನು ‘ಅಜ್ಜನ ಮನೆಗೆ’ ಪಾರ್ಸೆಲ್ ಮಾಡಿದುದು. ಇನ್ನು ಮುಂದೆಯೂ ಅದೇ ರೀತಿಯ ವ್ಯವಸ್ಥೆಯನ್ನೇ ಏನಾದರೂ ಮಾಡಬೇಕಷ್ಟೆ - ಬೇರೆ ನಿರ್ವಾಹವಿಲ್ಲ.

ಈಗಲಂತೂ, ಪುಟದ ಮೂರನೆ ಗೆರೆಗೆ ಮುಟ್ಟುವಾಗ ಹೊರಗೆ ಇದ್ದಕ್ಕಿದ್ದಂತೆ ಜಡಿಮಳೆ ಸುರಿದು ಮೂರು ಬಾರಿ ಪವರ ಆಫ್ - ಕಾರ್ಯಾಲಯ ಕತ್ತಲಲ್ಲಿ ಮುಳುಗಿತ್ತು. ಈ ಮಳೆಯಿಂದಾಗಿ ಯಾವ ಉಪಕಾರವೂ ಇಲ್ಲ - ನಾಳೆಯ ದಿನ ಸೆಖೆ ಇನ್ನಷ್ಟು ಹೆಚ್ಚುತ್ತದೆ ಅಷ್ಟೆ.

ಅವೆಲ್ಲವೂ ಮುಗಿದು ಈಗ outstanding take.

ಕರ್ನಾಟಕ ಟೈಮ್ಸ್‍ದ ರೂಮರ್ ವಿಚಾರ ತಿಳಿಸಿ. ಸತ್ಯನ ಪತ್ರ ಬರುವ ಎರಡು ದಿನಗಳ ಮೊದಲಿನಿಂದ ಆರಂಭವಾದ ಒಂದು ದುಸ್ಥಿತಿ ಈಗಲೂ ಮುಂದುವರಿಯುತ್ತಾ ಇದೆ. ನೀವು ‘ವಿಮಾನ ಸಂಚಿಕೆ’ಯ ಕೆಲವು ಜಾಹೀರಾತುಗಳನ್ನು ಓದಿದ್ದರೆ ಪರಿಸ್ಥಿತಿ ಅರ್ಥವಾಗುತ್ತಿತ್ತು. Wanted graduates for trg as Sub Editors ಎಂಬುದರ ಮೂರು repeat insertions ಬಂದವು. ಅರ್ಜಿ ಕೊಟ್ಟವರು ಒಬ್ಬರು ಮಾತ್ರ!

ಅಂದರೆ, ಕಳೆದ ತಿಂಗಳಷ್ಟೇ capital ಎಂದರೆ ರಾಜಧಾನಿ ಎಂದು ಮಾತ್ರವೇ ಗೊತ್ತಿದ್ದ ಒಬ್ಬ graduವೇಟರು ಕೆಲಸ ಬಿಟ್ಟೋಡಿದರು. ಅವರ ಮೊದಲು ಇಬ್ಬರು ಹೋಗಿದ್ದರು. ಈ ದಿನದಿಂದ ಹುರುಳಿ ಭೀಮರಾಯರ ಮಗ ರಾಮಚಂದ್ರರಾಯರು ರಾಜಿನಾಮೆ ಇತ್ತಿದ್ದಾರೆ. ಇನ್ನೊಂದು ವಾರದಲ್ಲಿ ಒಬ್ಬರು ಬಿಡಲಿದ್ದಾರೆ. ಅಲ್ಲಿಗೆ ಹಗಲು ಪಾಳಿಯಲ್ಲಿ ಮೂರು ಜನ, ರಾತ್ರಿಯಲ್ಲಿ ನಾಲ್ವರು ಉಳಿದಂತಾಯಿತು. ಈಗಂತೂ 2nd Pageನ ಜೊತೆಗೆ 3 - 4 ಮತ್ತು ಕೆಲವು ಬಾರಿ ಮುಖಪುಟಕ್ಕೂ matter ತಯಾರಿಸಿಟ್ಟು ಜೊತೆಗೆ ವಾರದ ಆತ್ಮಹತ್ಯೆಯ ಎರಡು ಪುಟಗಳನ್ನು ಸಿದ್ಧಗೊಳಿಸಬೇಕಾಗುತ್ತದೆ. ಆದರೂ ಕೆಲಸ ಹೆಚ್ಚಿರುವುದಕ್ಕೆ ಅಲ್ಲ, ನನ್ನ ಬೇಸರ. ಅನಗತ್ಯವಾದ ತೊಂದರೆಗಳನ್ನು ಬೇಕೆಂದೇ ಕೊಡುತ್ತಾರಲ್ಲ ಎಂಬುದಕ್ಕೆ ಅಷ್ಟೆ. ಆದ್ದರಿಂದ ಇಲ್ಲಿ ಎರಡು ವರ್ಷವಾದರೂ ಕಳೆಯಬೇಕೆಂಬ ಆಸೆ ಇರಿಸಿ ಬಂದು ಸೇರಿದ್ದೆ. ಈಗ ಸಾಧ್ಯವಾದಷ್ಟು ಬೇಗ ಬೇರೆಲ್ಲಾದರೂ ಹೋಗೋಣವೆಂದಿದ್ದೇನೆ. ನಿಮ್ಮಲ್ಲಿ ಏನಾದರೂ opening? (ನಾನು ತಮಾಷೆ ಮಾಡುತ್ತಿಲ್ಲ, serious ಆಗಿಯೇ ಬರೆಯುತ್ತಿದ್ದೇನೆ ... ) ಬೇರೆಯೂ ಪ್ರಯತ್ನ ಮಾಡುತ್ತಾ ಇದ್ದೇನೆ, ನೋಡಬೇಕು.

ಅದು ಹಾಗಾದರೆ, ಕಂಪೋಜಿಂಗ್ ವಿಭಾಗದ ಅವಸ್ಥೆ ಬೇರೆಯೇ ಇದೆ. ದಿನ (ಅಂದರೆ 8 ಘಂಟೆ) ಒಂದಕ್ಕೆ 5 ಕಾಲಂ solid matter ಎಳೆಯುವ ಪ್ರಭೃತಿಗಳು ಇಲ್ಲಿನವರು. ಅದೂ 10 pt.ನಲ್ಲಿ. ಆದರೆ ಪ್ರಯೋಜನವೇನು? ಅವರಿಗೆ ದೊರೆಯುವ ವೇತನವಂತೂ stationary levelನಲ್ಲೇ ಇದೆ. ಯಾರಾದರೂ increment ಸುದ್ದಿ ಎತ್ತಿದರೆ ‘ಸಿಗುವಲ್ಲಿಗೆ ಹೋಗಬಹುದು’ ಎಂಬ ಉತ್ತರ ಸಿದ್ಧವಾಗಿಯೇ ಇರುತ್ತದೆ. ಉತ್ತರ ಪಡೆದು ಕೆಲವರು ಹೋಗಿಯೂ ಇದ್ದಾರೆ. ಆದುದರಿಂದ ಅಲ್ಲೂ shortage. Deadline ಹೇಗೋ meet ಆಗುತ್ತದೆ. ಅಂತೂ ಪರಿಸ್ಥಿತಿ ಯಾವ ಕಾರಣವೂ ಇಲ್ಲದೆ ‘ಅಗ್ದಿ ಭಯಂಕರ’ ಆಗಿ ನಿಂತಿದೆ.

ಆದುದರಿಂದ ಪರಿಸ್ಥಿತಿ ಎಲ್ಲಿ ಬಂದು ನಿಲ್ಲುವುದೋ ಹೇಳಲು ಸಾಧ್ಯವಿಲ್ಲ. ಈಗ, ‘ಮಂಗನ ಕೈಯ ಮಾಣಿಕ್ಯ’ದ ಕಥೆಯೊಂದು ಇಲ್ಲಿ ನಡೆಯುತ್ತಿರುವ ವಿಚಾರ. Too hot to handle. ಅದನ್ನು ನಾನು Kodialabail ಬಿಟ್ಟ ದಿನವೇ ಹೇಳಬಹುದು. ಅದಕ್ಕೆ ಮೊದಲು ಹೇಳಲಾರೆ. ಹಾಗಿದೆ ಸ್ವಾಮೀ, ನಮ್ಮಲ್ಲಿನ ಕಥಿ.

ಶ್ರೀ DH ಶ್ರೀನಿವಾಸರು Chief Reporter, Tainadu ಗೊತ್ತು ತಾನೆ? (DH ಶ್ರೀನಿವಾಸ - ‘ಡಚ್ಚ’ ಮುಂದೆ Deccan Heraladನ Sports Reporter ಆದವರು - ಸಂ.]. ಮಂಗಳೂರಿಗೊಂದು ಬಾರಿ ಬಂದು ಹೋಗಿದ್ದರಂತೆ..... ನನಗೆ ಗೊತ್ತಾಗದಂತೆ. ನಾನು ಆನಂತರ ಸುದ್ದಿ ತಿಳಿದು , ಒಂದು ಕಾರ್ಡ್ ಅವರಿಗೆ ಬರೆದಿದ್ದೆ.

ಅಂದ ಹಾಗೆ ಈ ದಿನ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ, ಮಾಜಿ ಮಂತ್ರಿ H.K.V.Goudh, ಮಾಜಿ ಮಂತ್ರಿ B.V.Baliga ಇವರು ಆಗಮಿಸಿದ್ದರು. "ನಾನು ಅವರನ್ನು ಮಾತನಾಡಿಸಲಿಲ್ಲ". ಅದುವಲ್ಲದೆ ಬಸವನಗುಡಿ ಕಲಾಮಂದಿರದ ಲೇಖಕ ಮ.ನ.ಮೂರ್ತಿಯವರೂ [ಕಾದಂಬರಿಕಾರ ಮ.ನ.ಮೂರ್ತಿ ‘ಜನವಾಣಿ’, ‘ಪ್ರಜಾಮತ’ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು - ಸಂ.]ಬಂದಿದ್ದರು. ‘ಬೆಂಗಳೂರಿನ ವಿಶೇಷ’ ಸುದ್ದಿ ಏನೂ ಹೇಳಲಿಲ್ಲ.

ಉಳಿದವರೆಲ್ಲ ಹೇಗಿದ್ದಾರೆ? ನನ್ನಲ್ಲಂತೂ ಯಾವ ಸುದ್ದಿಯೂ ಇಲ್ಲ. ‘ವಿಚಾರವಾಣಿ’ ಎಂಬ ಮಾಜಿ ಶಿವರಾಮ ಕಾರಂತ ಸಂಪಾದಿತ, ಈಗ ಡಾಯಂ.ಬಿ.ಮರಕಿಣಿ ಎಂಬುವರ editingನಲ್ಲಿ ಹೊರಬರುತ್ತಿರುವ ವಾರಪತ್ರಿಕೆಯೊಂದು ಈಗ ಮೂರು ವಾರಗಳಿಂದ ಪುತ್ತೂರಿನ ವಾಗ್ದೇವಿ (?) ಅಚ್ಚುಕೂಟದಿಂದ ಪ್ರಕಟವಾಗುತ್ತಿದೆ ... ಎಂಬುದೊಂದು ಮಾತ್ರ ಸುದ್ದಿ. ಅಲ್ಲೇ ಇನ್ನೊಂದು ವಾರ ಪತ್ರಿಕೆಯೂ ಜನಸಂಘದ ವತಿಯಿಂದ ಪ್ರಸಿದ್ಧವಾಗುತ್ತಿದೆ. ಅದರ ಹೆಸರು "ಭಾರತ".

ವಿವರವಾಗಿ ಬರೆಯುತ್ತೀರಾ? ಏನು ಸುದ್ದಿಯಾದರೂ ಚಿಂತಿಲ್ಲ ... ಯಾವ method ಆರಂಭಿಸಿದರೂ ಆಗಬಹುದು. ಘಂಟೆಯೂ 1:20 ಆಯಿತು. ಪತ್ರವೂ ಮುಗಿಯುತ್ತಾ ಬಂತು. ಕಣ್ಣೆವೆ ಎಳೆಯುತ್ತಿದೆ. ಬರಲೆ? ನಮಸ್ಕಾರ.

ನಿಮ್ಮ

ಪಗೋ

Wednesday, May 20, 2009

ತಾನುಂಟೋ, ಪೇಪರುಂಟೋ!


- ಸುದ್ದಿಜೀವಿ


ತಮ್ಮನ್ನು ‘ಸುದ್ದಿಜೀವಿ’ ಎಂದು ಕರೆದುಕೊಂಡ ದಿನಪತ್ರಿಕೆಯ ಸುದ್ದಿ ಸಂಪಾದಕರು, ವರದಿಗಾರರು ತಳೆಯುವ ‘ತಾನುಂಟೋ, ಪೇಪರುಂಟೋ’ ಧೋರಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪೇಪರಿನಲ್ಲಿ ಹೆಗ್ಗಳಿಕೆ ವರದಿಗಾರನದೋ, ಇಲ್ಲವೇ ಉಪಸಂಪಾದಕನದೋ ಎಂಬ ಬಗೆಹರಿಸಲಾಗದ ಪ್ರೇಮ-ವಿವಾದವನ್ನು ಅವರು ಸ್ವಾರಸ್ಯಕರವಾಗಿ ಬಿಸಿ ಏರಿಸದೇ ಬಣ್ಣಿಸುತ್ತಾರೆ. ಅನುದಿನ ನಡೆಯುವ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರ ಬರುವವರೆಗೆ ಅಷ್ಟೇ! - ಎಂಬ ವಿವೇಚನೆ ಅವರದು. ತಾನು ಮಾಡುವ ಕೆಲಸ, ಪರಿಸ್ಥಿತಿಗಳನ್ನು ಗಮನಿಸಿದಾಗ ವರದಿಗಾರ ತಳೆಯುವ ಧೋರಣೆಯನ್ನು ಮನ್ನಿಸಬಹುದು - ಸಂ. - ಬೆಂಗಳೂರು ವರದಿಗಾರರ ಕೂಟದ ಸ್ಮರಣ ಸಂಚಿಕೆ (1971)


ರಿಪೋರ್ಟರಿಂದ ಪೇಪರೋ, ಪೇಪರಿಂದ ರಿಪೋರ್ಟರೋ?!

ಈ ಬೀಜವೃಕ್ಷ ಪ್ರಶ್ನೆಗೆ ರಿಪೋರ್ಟರುಗಳಿಂದ ಏನು ಉತ್ತರ ಬರುತ್ತದೆಂದು ಹೇಳುವುದೇ ಬೇಡ!

ಸುದ್ದಿ ಇಲ್ಲದೆ ಪತ್ರಿಕೆ ಆಗುವುದಿಲ್ಲ; ವರದಿಗಾರರಿಲ್ಲದಿದ್ದರೆ ಸುದ್ದಿ ಒದಗುವುದಿಲ್ಲ - ಏನೂ ಇಲ್ಲದಿದ್ದರೆ ಸ್ವಯಂ ಸೃಷ್ಟಿ ಮಾಡುವ ಕಲೆಯೂ ಅವರಿಗೆ ಲೇಖನಿಗತ. ಯಾವುದೂ ದೊರಕದಿದ್ದಾಗ ‘ಹಳೆಯ ಮದ್ಯವನ್ನೇ ಹೊಸ ಶೀಶೆಯಲ್ಲಿ ಹಾಕಿ’, ‘ಸ್ಕೂಪ್’ನ ರೂಪ ಕೊಟ್ಟು, ವಿಜೃಂಭಿಸುವ ಉತ್ಪಾದಕ ತಂತ್ರವೂ ಅವರಿಗೆ ಸಿದ್ಧಿಸಿರುವುದೇ!!

ಆದರೆ ಸುದ್ದಿ ತರುವವರದು ಹೆಚ್ಚುಗಾರಿಕೆಯೋ, ಅದನ್ನು ಒಪ್ಪಮಾಡಿ, ಅಚ್ಚುಕಟ್ಟುಗೊಳಿಸಿ, ಅಳವಡಿಸಿ ಪೇಪರನ್ನು ಉಣಬಡಿಸುವ ಉಪಸಂಪಾದಕರಗಳದು ಹೆಗ್ಗಳಿಕೆಯೋ ಎಂಬುದೊಂದು ಬಗೆಹರಿಯದ ನಿರಂತರ ವಿವಾದ.

ಪತ್ರಿಕೋದ್ಯಮದ ಪ್ರಾರಂಭದೆಶೆಯಲ್ಲಿ ಪತ್ರಿಕಾ ಕಚೇರಿಗಳಲ್ಲಿದ್ದ ಬೆರಳೆಣಿಕೆಯ ಸಿಬ್ಬಂದಿಯೇ ವರದಿಗಾರರೂ, ಉಪಸಂಪಾದಕರೂ, ಸಂಪಾದಕೀಯ ಬರೆಯುವವರೂ ಸರ್ವಸ್ವವೂ ಆಗಿ ಕೆಲಸ ಮಾಡುತ್ತಿದ್ದ ಕಾಲಕ್ಕೂ, ಇಂದಿಗೂ ಮಹತ್ತರ ವ್ಯತ್ಯಾಸವುಂಟು: ವಾರ್ತೆಯನ್ನರಸಿ ಅಹರ್ನಿಶಿ ನಗರದ ಮೂಲೆಮೂಲೆಗೂ ಧಾವಿಸುವ ವರದಿಗಾರರ ಪಡೆಯೊಂದು; ಕಚೇರಿಯ ನಾಲ್ಕು ಗೋಡೆಗಳ ನಡುವೆ ಅಡಗಿದ ವಿಶ್ವದರ್ಶಕ ಉಪಸಂಪಾದಕ ಮಂಡಲಿಯೊಂದು - ಪ್ರತ್ಯೇಕವಾಗಿ. ಆದರೆ ಪರಸ್ಪರ ಪೂರಕವಾಗಿ, ಕೆಲಸ ಮಾಡುತ್ತಿರುವಾಗ ಈ ಹೆಚ್ಚುಗಾರಿಕೆಯ ಸೂಕ್ಷ್ಮ ಪ್ರಶ್ನೆಯನ್ನು ಬಗೆಹರಿಸುವುದು ಯಾವ ಸುಪ್ರೀಮ್ ಕೋರ್ಟಿಗೂ, ಪತ್ರಿಕಾ ಮಂಡಲಿಗೂ ಸಾಧ್ಯವಿಲ್ಲವೆಂದು ಕಾಣುತ್ತದೆ!

ಸಿದ್ಧ-ಅಸಿದ್ಧ-ಪ್ರಸಿದ್ಧ, ರಹಸ್ಯ-ಬಹಿರಂಗ, ನಿರೀಕ್ಷಿತ-ಅನಿರೀಕ್ಷಿತ, ವ್ಯವಸ್ಥಿತ-ಹಠಾತ್, ಗಂಡಾಂತರಕಾರಿ ಇಲ್ಲವೇ ಸುಲಭ-ಲಭ್ಯ, ಹೀಗೆ ನಾನಾ ರೀತಿಯ ಘಟನಾವಳಿಗಳ ಸುದ್ದಿಗಳನ್ನು ವರದಿಗಾರರು ತರುವುದೊಂದು ಸುರಮ್ಯ ಸಾಹಸವಾದರೆ, ಈ ಸುದ್ದಿ ಸಾಹಿತ್ಯವನ್ನೆಲ್ಲಾ ಕೇರಿ-ತೂರಿ, ಕಸಕಡ್ಡಿಗಳನ್ನು ವಿಸರ್ಜಿಸಿ, ಹದಗೊಳಿಸಿ, ಪ್ರಪಂಚ ವಾರ್ತೆಗಳನ್ನು ಸಮಗ್ರ ಪರಿಕರಗಳೊಡನೆ ಸೇರಿಸಿ ಹಿತಮಿತವಾದ ಚೊಕ್ಕ ಪತ್ರಿಕಾ ಭೋಜನ ನೀಡುವುದು ಉಪಸಂಪಾದಕ ಪರಿವಾರದ ನಿತ್ಯದ ಕಸರತ್ತೇ ಸರಿ.

ತಾವು ತಂದ ಸುದ್ದಿಯೆಲ್ಲಾ ಮುಖ್ಯ; ಅದರಲ್ಲಿ ಬರೆದ ವಿವರವೆಲ್ಲಾ ಅವಶ್ಯ; ಒಂದು ಪದವನ್ನೂ ಅಳಿಸದೆ ಹಾಗೆಯೇ ಅಚ್ಚಿಗೆ ಕೊಡಬೇಕೆಂಬ ಅಗ್ಗಳಿಕೆಗಾರರೂ ನಮ್ಮ ವರದಿಗಾರರಲ್ಲುಂಟು. ಸಣ್ಣ ಕಳವಿನಿಂದ ಹಿಡಿದು ಭಾರೀ ಕೊಲೆಯವರೆಗೆ, ಪುರಸಭೆ-ಕಾರ್ಪೊರೇಷನ್ನುಗಳ ಸಾಮಾನ್ಯ ಸಭೆಯಿಂದ ವಿಧಾನಮಂಡಲ ವಿಶೇಷ ವರದಿಯವರೆಗೆ, ಸಣ್ಣ ಪುಟ್ಟ ವರ್ಗಾವರ್ಗಿಯಿಂದ ಹಿಡಿದು ಸರ್ಕಾರವನ್ನೇ ಪಲ್ಲಟಗೊಳಿಸುವ ವಿದ್ಯಮಾನಗಳವರೆಗೆ, ಶ್ರೀರಾಮೋತ್ಸವದ ಪತ್ರಿಕಾ ಗೋಷ್ಟಿಯಿಂದ ಹಿಡಿದು ರಾಷ್ಟ್ರ ವರಿಷ್ಟರ ಸಂದರ್ಶನದವರೆಗೆ, ವಿದ್ಯಾರ್ಥಿ ಸಂಘದ ಮಾಮೂಲು ಆಯ್ಕೆಯಿಂದ ಸಾರ್ವತ್ರಿಕ ಚುನಾವಣೆಯವರೆಗೆ ತಾವು ಬರೆದ ವಿವಿಧ ದರ್ಜೆಯ ವರದಿಗಳನ್ನೆಲ್ಲಾ ಸಮಗ್ರವಾಗಿಯೇ ಪ್ರಕಟವಾಗಬೇಕೆಂಬ ಹಟಗಾರರೂ ಉಂಟು. ಇವುಗಳಲ್ಲಿ ಪ್ರತಿಯೊಂದೂ ಪ್ರಥಮ ಪುಟದಲ್ಲೇ ಪ್ರಕಟಾವಾಗಬೇಕೆಂದು ಆಗ್ರಹಿಸುವ ಛಲವಾದಿಗಳೂ ಇದ್ದಾರೆ! (ಇಂತಹ ವರದಿಗಳನ್ನೆಲ್ಲಾ ಪ್ರಕಟಿಸಲು, ಪತ್ರಿಕೆ ದಿನಕ್ಕೆ ಹತ್ತಾದರೂ ’ಪ್ರಥಮ ಪುಟ’ಗಳನ್ನು ಹೊಂದಿರಬೇಕಾಗುತ್ತದೋ ಏನೋ ಎನಿಸುತ್ತದೆ!)

ಪುಟ ಸಾರ್ವಭೌಮರು

ಇನ್ನು ಇಲಿ ಹೋದರೆ ಹುಲಿ ಹೋಯಿತೆಂಬಂತೆ, ವಿರೋಧ ಪಕ್ಷದವರು ಕೆಮ್ಮಿದರೆ ಮಂತ್ರಿ ಮಂಡಲವೇ ಉರುಳಿಬಿದ್ದಿತೆಂಬಂತೆ, ಪ್ಯಾರಾದಲ್ಲಿ ಮುಗಿಸಬಹುದಾದ ಸುದ್ದಿಯನ್ನು ಕಾಲಮುಗಳನ್ನೇ ಆಕ್ರಮಿಸುವಂತೆ, ಜಾಗ ಭರ್ತಿಯ ತುಣುಕಾಗಬಹುದಾದದ್ದನ್ನು ಮೂರಂಕಣದ ಮಹಾವಾರ್ತೆಯಾಗುವಂತೆ ಲಂಬಿಸುವ ಪ್ರತ್ಯುತ್ಪನ್ನಮತಿಗಳೂ ಇದ್ದಾರೆ; ಈ ಪುಟ ಸಾರ್ವಭೌಮರ ಉತ್ಪಾದನೆಯನ್ನು ಅವರು ಬಯಸುವ ರೀತಿಯಲ್ಲೇ ಇಡಿಯಾಗಿ ಅಳವಡಿಸಿದರೆ ಕನ್ನಡ ಪತ್ರಿಕೆಗಳು ಸುಲಭವಾಗಿ ’ನ್ಯೂಯಾರ್ಕ್ ಟೈಮ್ಸ್’ ಆಗಬಹುದು - ಪುಟ ಸಂಖ್ಯೆಯಲ್ಲಿ! (ಮ್ಯಾನೇಜರ್ ಮಹಾಶಯರು ಧಾರಾಳವಾಗಿ ನ್ಯೂಸ್ ಪ್ರಿಂಟನ್ನೂ, ಕಂಪೋಸಿಂಗ್ ಸಿಬ್ಬಂದಿಯನ್ನೂ ಒದಗಿಸುವುದಾದರೆ! - [ಇದು ಹೆಚ್ಚೂ ಕಮ್ಮಿ ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿ. ಧಾರಾಳವಾಗಿ ನ್ಯೂಸ್ ಪ್ರಿಂಟ್ ಸಿಗುವ, ಪ್ರತ್ಯೇಕ ಕಂಪೋಸಿಂಗ್ ಸಿಬ್ಬಂದಿಯ ಅಗತ್ಯವೂ ಇಲ್ಲದ ಇಂದಿನ ದಿನಗಳಲ್ಲಿ ಮ್ಯಾನೇಜರ್ ಮಹಾಶಯರ ಮರ್ಜಿ ಹಿಡಿಯಬೇಕಿಲ್ಲವೇನೊ? - ಸಂ.]

ವರದಿಗಾರರ ಸುದ್ದಿಗಳ ಉದ್ದ-ಗಾತ್ರಗಳ ಹೊಡೆತವನ್ನು ಹೇಗಾದರೂ ತಡೆದು ಸುಧಾರಿಸಬಹುದು; ಅವರ ಲಿಪಿಯ ಕಿರಿಕಿರಿಯನ್ನು ಸಹಿಸಿಕೊಳ್ಳುವುದು ಮಾತ್ರ ಕಷ್ಟವೆಂದು (ಕನ್ನಡ ಪತ್ರಿಕೆಗಳಲ್ಲಿ) ಉಪಸಂಪಾದಕರೂ, ಕಂಪೋಸಿಟರುಗಳೂ ದೂರುವುದುಂಟು. ‘ವೈದ್ಯ ಲಿಪಿ - ಬ್ರಹ್ಮ ಲಿಪಿ’ ಎಂಬ ಗಾದೆಯ ಬದಲು, ‘ರಿಪೋರ್ಟರ್ ಲಿಪಿ’ಯನ್ನೇ ಆ ಗೀಚು ಗೌರವಕ್ಕೆ ಏರಿಸುವುದು ಅತ್ಯಗತ್ಯವೆಂದು ನನ್ನ ಭಾವನೆ. ಮುದ್ದಾಗಿ, ಗುಂಡಾಗಿ, ಸ್ಫುಟವಾಗಿ ಬರೆಯುವ ವರದಿಗಾರರ್ಯಾರಾದರೂ ಅಪ್ಪಿ ತಪ್ಪಿ ಇದ್ದರೆ (ಕೆಲವರು ಇದ್ದಾರೆ, ಎನ್ನಿ!) ಅವರಿಗೆ ಸ್ವರ್ಣಾಕ್ಷರ ಪ್ರಶಸ್ತಿಯಿತ್ತು ಸನ್ಮಾನಿಸಬೇಕು ಇಲ್ಲವೇ ರಿಪೋರ್ಟರ್ ಹುದ್ದೆಯಿಂದ ಬರ್ತರ್ಫ್ ಮಾಡಬೇಕು!

ಅಂತೂ ಕನ್ನಡ ಲಿಪಿ ಸುಧಾರಣೆಯಾಗಬೇಕೆಂದು ವಾದಿಸುವವರು, ಬಹುತೇಕ ವರದಿಗಾರರ ಕಾಕಲಿಪಿ - ಬ್ರಹ್ಮಲಿಪಿಗಳನ್ನು ನೋಡಿದ ಮೇಲೆ, ನಮ್ಮ ಲಿಪಿ ಸುಧಾರಣೆ ಆನಾಯಾಸವಾಗಿ ನಡೆದಿದೆಯೆಂದು ಹೆಮ್ಮೆಯ ನಿಟ್ಟುಸಿರು ಬಿಡಬಹುದು! ಕೆಲವು ವರದಿಗಾರರ ಇಂತಹ ಹಸ್ತಪ್ರತಿಯನ್ನು ತೋರಿಸಿ, ವಿಶೇಷ ಪರ್ಮಿಟ್‍ನ ವಸ್ತುಗಳನ್ನು ಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿತ್ತ ರಹಸ್ಯ ಸೂಚನೆಯೆಂಬಂತೆ ಉಪಯೋಗಿಸುವುದೂ ಸಾಧ್ಯವೆಂದು ಅನುಭವಿಗಳೊಬ್ಬರು ಹೇಳುತ್ತಾರೆ! ನಾನಾ ವರದಿಗಾರರು ವಿವಿಧ ವೇಗ-ಉನ್ಮಾದಗಳಲ್ಲಿ ಬರೆದ ಲಿಪಿಯನ್ನು ಅರ್ಥ ಮಾಡಿಕೊಂಡು ಅಚ್ಚಿಸಿದ ಉಪಸಂಪಾದಕರೂ-ಕಂಪೋಸಿಟರುಗಳೂ ಹಳೆಯ ಕನ್ನಡ ಶಿಲಾಶಾಸನಗಳನ್ನು ಸುಲಭವಾಗಿ ಓದಿ ಅರ್ಥ ಬಿಡಿಸಬಹುದೆಂದು ಪ್ರಾಚ್ಯ ಸಂಶೋಧಕರೊಬ್ಬರ ಸಲಹೆ!!

ಸ್ವರೂಪ ದರ್ಶನ

ಬರೆಯುವುದರಲ್ಲಿ ಬುದ್ಧಿವಂತಿಕೆಯಿಲ್ಲದಿದ್ದರೂ, ಬಡಾಯಿಯಲ್ಲಿ ಸಂದರ್ಶಕರನ್ನು ಬೆಪ್ಪು ಹಿಡಿಸುವಂತಹವರು; ವರದಿಯ ಶೈಲಿ-ಹೂರಣಗಳಲ್ಲಿ ಸತ್ತ್ವವಿಲ್ಲದಿದ್ದರೂ ಉಡುಪಿನ ಆಡಂಬರ-ಠೀವಿ-ಗತ್ತುಗಳಿಂದ ಇತರರನ್ನು ಮರುಳು ಮಾಡಬಲ್ಲವರು; ನೋಡಲು ವಕ್ರರಂತೆ, ಒರಟರಂತೆ, ಪೆದ್ದರಂತೆ ಕಂಡರೂ, ತಮ್ಮ ಚಾಣಕ್ಷತನ, ತಿಳಿವಳಿಕೆ, ಸುದ್ದಿಗ್ರಹಣ ಬುದ್ಧಿಗಳಿಂದ ಎಂತಹ ದುಸ್ಸಾಧ್ಯ ಮೂಲದಿಂದಲೂ ವಾರ್ತೆಯನ್ನೆಬ್ಬಿಸಿ ತರುವವರು - ಹೀಗೆ ವರದಿಗಾರರಲ್ಲೂ ಬಗೆಬಗೆಯ ಸ್ವಭಾವದವರುಂಟು (ಉಪಸಂಪಾದಕ ವರ್ಗವೂ ಇದಕ್ಕೆ ಹೊರತಿಲ್ಲವೆನ್ನಿ). ಮತ್ತೆ ಕೆಲವರು ವರದಿಗಾರರಿದ್ದಾರೆ. ಅವರೇ ‘ಅರಿಭಯಂಕರ’ರು. ವಾರ್ತಾ ಸಂದರ್ಶನಗಳಲ್ಲಿ ಅವರು ಹಾಕುವ ಪಾತಾಳಗರಡಿ ಪ್ರಶ್ನೆಗಳಿಂದ, ತತ್ತರಿಸುವಂತೆ ಮಾಡುವ ಪಾಟೀಸವಾಲಿನಿಂದ ಉತ್ತರಿಸುವಂತೆ ಬಲಾತ್ಕರಿಸುವ, ಬೆರಳ ಮೇಲಿನ ಅಂಕೆ-ಅಂಶಗಳಿಂದ ಸಂದರ್ಶಕರು ತಾವು ಯಾವ ಸಂಗತಿಗಳನ್ನು ಮುಚ್ಚಿಡಬೇಕೆಂಬ ಉದ್ದೇಶದಿಂದ ಈ ವಾರ್ತಾಗೋಷ್ಟಿ ಕರೆದಿದ್ದರೋ ಆ ಆಶಯವೇ ಭಗ್ನವಾಗಿ ತಮಗೆ ಅಹಿತವಾದ ವಸ್ತು ಸ್ಥಿತಿಯನ್ನು ತಾವಾಗಿ ಅವರು ಒದರಿ ಬಿಡುವಂತೆ ಮಾಡಿಬಿಡುತ್ತಾರೆ!

"ಶಿಸ್ತಿನ ಪುಟ್ಟಸ್ವಾಮಿಗಳು"

ಕೆಲವು ವರದಿಗಾರರಂತೂ ತಮ್ಮ ಮಾತಿನ ಮೋಡಿಯಿಂದ, ನಯಗಾರಿಕೆಯಿಂದ ಎಂತಹ ಕಲ್ಲನ್ನೂ ಮಾತನಾಡಿಸಿ ಸುದ್ದಿಯನ್ನು ಭೇದಿಸಿಬಿಡುತ್ತಾರೆ. ಹಲವಾರು ಮಂದಿಯಾದರೋ ವರದಿಗಾರ ವೃಂದಕ್ಕೇ ಕೇವಲ ‘ಭೂಷಣ’; ನೋಡುವುದಕ್ಕೆ ‘ಶಿಸ್ತಿನ ಪುಟ್ಟಸ್ವಾಮಿ’ಗಳು - ಅವರ ಅಲಂಕಾರವೊಂದೇ ಸಭೆ-ಗೋಷ್ಟಿಗಳಿಗೆ ನೀಡುವ ಕಳೆ; ಟೀ-ಪಾರ್ಟಿಗಳನ್ನು ಭರ್ತಿ ಮಾಡುವುದಕ್ಕಾಗಿಯೇ ಬರುವುದು ಅವರ ‘ಜೀವನ ಯಾತ್ರೆ’!

ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಘಟನೆ, ಭೇಟಿ ಅಥವಾ ಕಾರ್ಯಕಲಾಪದ ವರದಿಯನ್ನು ರಾತ್ರಿ ಒಂಬತ್ತು ಗಂಟೆಗೆ (ಹೇಗಿದ್ದರೂ ಮಾರನೆಯ ಬೆಳಿಗ್ಗೆಯ ಪತ್ರಿಕೆಯಲ್ಲಿ ತಾನೇ ಬರುವುದು!) ಕೊಡುವ ‘ಎಮ್ಮೆಯ ಮೇಲೆ ಮಳೆಗರೆದಂತಹ’ ನಿಶ್ಚಿಂತ ಸ್ವಭಾವದವರೂ ಇದ್ದಾರೆ; ಆದುದನ್ನು ಆಗಿಂದಾಗಲೇ ಅಲ್ಲಿಂದಲೇ ಫೋನಿನಲ್ಲಿ ತುರುಕಿ ಕಿರುಕುಳಗೊಳಿಸುವ ಆತುರಗಾರರೂ ಇದ್ದಾರೆ. ಹೀಗೆ ಅವಸರ ಪಟ್ಟು ಪೊಲೀಸು ವರ್ತಮಾನಗಳೂ, ಕೋರ್ಟು ಸುದ್ದಿಗಳೂ (ಇನ್ನೊಮ್ಮೆ ತಾಳೆಮಾಡಿ ನೋಡುವ ವ್ಯವಧಾನವನ್ನೂ ತಳೆಯದೆ) ಅಚ್ಚಿಗೆ ಧಾವಿಸುವಂತೆ ಮಾಡಿ, ಆನಂತರ ಕಚೇರಿಯನ್ನೂ ಪೇಚಿಗೆ ಸಿಲುಕಿಸಿ, ತಾವೂ ತೊಂದರೆಗೆ ಗುರಿಯಾಗುವವರೂ ಉಂಟು.

ಅಹಂ ಬ್ರಹ್ಮಾಸ್ಮಿ!

’ನಾನೇ ಎಲ್ಲಾ ಸುದ್ದಿಗಳನ್ನೂ ಕೊಡುವವನು! ನನ್ನಿಂದಲೇ ಪತ್ರಿಕೆ’ ಎಂಬಂತಹ ಭ್ರಮೆಯನ್ನು ಹೊಂದಿ, ಸಾರ್ವಜನಿಕರಲ್ಲಿ ಮೆರೆಯುವವರೂ ಉಂಟು. ಅವರು ಕೊಟ್ಟ ವರದಿಗಳು ಅಚ್ಚಿನಿಂದ ಹೊರಬರುವ ವೇಳೆಗೆ ಎಷ್ಟೊಂದು ಕಟಾವು, ಮಾರ್ಪಾಟು, ಸಂಕ್ಷೇಪಗಳಿಗೆ ಒಳಗಾಗಿರುತ್ತವೆ. ಬಂದರೂ, ಒಟ್ಟು ಪತ್ರಿಕೆಯ ವಿಸ್ತಾರದಲ್ಲಿ ಅವೆಷ್ಟು ಕಡಿಮೆ ಸ್ಥಾನ ಆಕ್ರಮಿಸಿರುತ್ತವೆಂಬುದೂ ಕಂಪೋಸಿಟರಿಗೇ ಗೊತ್ತು! ಕೆಲವರ ಈ ಮಿತಿಮೀರಿದ ಪ್ರದರ್ಶನದಿಂದ, ಹಲವು ಮಹನೀಯರು ಸುದ್ದಿಯನ್ನು ಕೊಡದೇ ಹೋಗಿ, ತಕ್ಷಣ ಪ್ರಚಾರದ ಅವಕಾಶ ಕಳೆದುಕೊಳ್ಳುವುದೂ ಉಂಟು.

ಕೆಲವು ಸ್ಫೋಟಕ ಸನ್ನಿವೇಶಗಳಲ್ಲಿ, ಪತ್ರಿಕೆಗಳು ತಳೆಯುವ ಧೋರಣೆಗಳನ್ವಯ ಅಂತಹ ವಿದ್ಯಮಾನಗಳ ವರದಿಗಳ ಸ್ವರೂಪ-ವಿನ್ಯಾಸ-ಪ್ರಾಮುಖ್ಯ-ಶಿರೋನಾಮಗಳಲ್ಲಿ ತಿರುವು ಉಂಟಾಗುವುದರಿಂದ, ಸಂಬಂಧಪಟ್ಟ ವರದಿಗಾರರು ಎಷ್ಟೋ ವೇಳೆ ಜನನಿಂದನೆ-ಟೀಕೆ-ಭರ್ತ್ಯನೆ-ದೈಹಿಕ ಪೆಟ್ಟು-ವೈಯಕ್ತಿಕ ನಷ್ಟಗಳಿಗೂ ಗುರಿಯಾಗುವುದುಂಟು. ವಿದ್ಯಾರ್ಥಿ ಗಲಭೆ, ಕಾರ್ಮಿಕ ಮುಷ್ಕರ, ಕೋಮುವಾರು ಘರ್ಷಣೆ, ಭಾಷಾ ಜಗಳ, ರಾಜಕೀಯ ಪಕ್ಷಗಳ ತಿಕ್ಕಾಟ - ಮತ ಪ್ರದರ್ಶನ, ಪೊಲೀಸರ ಲಾಠಿ ಪ್ರಹಾರ-ಗೋಲೀಬಾರ್, ಕಾರ್ಪೊರೇಷನ್-ಶಾಸನ ಸಭೆಗಳಲ್ಲಿನ ಚಕಮಕಿ ಮುಂತಾದ ಪ್ರಸಂಗಗಳ ಸುದ್ದಿಗಳನ್ನು ಉಭಯ ಪಕ್ಷಗಳಿಗೂ ತೃಪ್ತಿಯಾಗುವಂತೆ ಪ್ರಕಟಿಸುವುದು ಎಂತಹ ನಿಷ್ಪಕ್ಷಪಾತಿ ಪತ್ರಿಕೆಗೂ ಅಸಾಧ್ಯ. ಇಂತಹ ಸಂದರ್ಭಗಳಲ್ಲಿ ಅವುಗಳ ವರದಿಗಾರರಿಗೆ ಅಪಖ್ಯಾತಿ - ಎಷ್ಟೋ ವೇಳೆ ಅಪಾಯವೂ - ಕಟ್ಟಿಟ್ಟ ಬುತ್ತಿ.

ಜಂಬವಿರಲಿ

ಏನೇ ಆಗಲಿ, ವರದಿಗಾರರದು ಕಷ್ಟ ಸಹಿಷ್ಣು ಜೀವನ - ಕಮಲ ಪತ್ರದಂತೆ ಅವರು ಟೀಕೆ-ಹೊಗಳಿಕೆಗಳಿಗೆ ಸಗ್ಗದೆ ನಿರ್ಲಿಪ್ತರಾಗಿ ಕರ್ತ್ಯವ್ಯ ನಿರ್ವಹಿಸುತ್ತಾ ಹೋಗುವವರೆಗೂ ಚಿಂತೆಯಿಲ್ಲ. ಮುಂಜಾವಿಂದ ಮುಂಜಾವಿನವರೆಗೆ ಯಾವುದೇ ಸಮಯ-ಸನ್ನಿವೇಶದಲ್ಲೂ ಕೆಲಸ ನಿರ್ವಹಿಸಲು ಸಿದ್ಧರಾದ, ಸರ್ವತ್ರಸನ್ನದ್ಧರಾದ ಸುದ್ದಿ ಸೈನಿಕರಿವರು; ಸರ್ವಾಂತರ್ಯಾಮಿಗಳು; ಸರ್ವ ವಿಷಯ ಪಾರಂಗತೆಯನ್ನು ಪ್ರಕಟಿಸಬೇಕಾದವರು. ಲೇಖನಿಯೇ ಇವರ ಶಸ್ತ್ರಾಸ್ತ್ರ - ಟಿಪ್ಪಣಿ ಪುಸ್ತಕವೇ ಅವರ ಗುರಾಣಿ - ಸರ್ವದಾ ಧೈರ್ಯದ ನಗೆಮೊಗವೇ ಅವರ ಮೈಗಾವಲು.

ಅಣುಬಾಂಬು ಕಂಡು ಹಿಡಿದಿರುವ ಈ ವಿನಾಶಕ ಯುಗದಲ್ಲೂ, ಚಂದ್ರನತ್ತ ಹಾರಿರುವ ಬಾಹ್ಯಾಂತರಿಕ್ಷ ಯಾತ್ರೆಯ ಈ ಶಕೆಯಲ್ಲೂ ವರದಿಗಾರರ ಲೆಕ್ಕಣಿಕೆಯೇ ಮಾನವನ ಗುರಿ-ಗಂಡಾಂತರಗಳನ್ನರಹುವ, ಎಚ್ಚರಿಸುವ ಸಾಧನವಾಗಿ ಇನ್ನೂ ಉಳಿದಿರುವುದು ನಾಗರಿಕತೆಯ ಪುಣ್ಯ. ರಿಪೋರ್ಟರುಗಳ ಚಿಕಿತ್ಸಕ ಬುದ್ಧಿ, ಅನ್ವೇಷಕ ಸಾಹಸ, ಜನಸೇವೋತ್ಸಾಹ, ಅನ್ಯಾಯಗಳನ್ನು ಬಯಲಿಗೆಳೆಯುವ ಛಲ, ಇವೇ ಸಮಾಜಕ್ಕಿರುವ ಶ್ರೀರಕ್ಷೆ.

ಈ ವಿಶಾಲ ದೃಷ್ಟಿಯಿಂದ ನೋಡಿದಾಗ ರಿಪೋರ್ಟರು ‘ತಾನುಂಟೋ, ಪತ್ರಿಕೆಯುಂಟೋ’, ‘ತಾನುಂಟೋ, ಮೂರು ಲೋಕವುಂಟೋ’ ಎಂದು ಜಂಬದಿಂದ ಮೆರೆದರೆ ಮತ್ಸರಪಡಬೇಕಿಲ್ಲ. ಆದ್ದರಿಂದಲೇ ಸಂಪಾದಕೀಯ ಕೋಣೆಗಳಲ್ಲಿ ಅನುದಿನ ನಡೆಯುವ ರಿಪೋರ್ಟರ್-ಸಬ್ ಎಡಿಟರ್ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರಬರುವವರೆಗೆ, ಅಷ್ಟೇ!
---


Thursday, May 14, 2009

Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು!

ಪ.ಗೋ. ಮತ್ತು ಹೆಚ್.ಆರ್.ನಾಗೇಶರಾಯರ ನಡುವಣ ಪತ್ರ ವ್ಯವಹಾರ ಕೇವಲ ಕಾರ್ಡುಗಳಿಗಷ್ಟೇ ಮೀಸಲಿತ್ತೆಂಬ ನನ್ನ ಊಹೆ ಸುಳ್ಳಾಯಿತು. ದೀರ್ಘ ಪತ್ರಗಳ ಗುಚ್ಛವೊಂದನ್ನು ಬಿಡಿಸುತ್ತಾ ಹೋದೆ. 27-11-1959ರಂದು ಪ.ಗೋ. ಬರೆದಿರುವ ಈ ಎಂಟು ಪುಟಗಳ ಪತ್ರದಲ್ಲಿ ಸ್ವಾರಸ್ಯದ ಅನುಭಾವ ಖಂಡಿತವಾಗಿಯೂ ನಿಮಗಾಗಬಹುದೆಂಬ ನಂಬಿಕೆಯಿಂದ ಯಥಾವತ್ತಾಗಿ ನಕಲಿಸಿದ್ದೇನೆ. ಇನ್ನು ಪ.ಗೋ. ಉಂಟು, ನೀವುಂಟು!

----------------------

EMBARGO: NOT TO BE READ BEFORE 12 MIDNIGHT DEC 31 OF 1959 ಪತ್ರದ ಮೊದಲ ಸಾಲಿನಲ್ಲಿ ಹೀಗೊಂದು ಮುನ್ಸೂಚನೆಯಿದ್ದರೂ 30-11-1959ರಂದು ಪತ್ರ ಸ್ವೀಕರಿಸಿದ ನಾಗೇಶರಾಯರು EMBARGOಗೆ ಕೇರ್ ಮಾಡದೆಯೇ ಓದಿ 17-12-1959ರಂದೇ ಮಾರೋಲೆ ಬರೆದು ಬಿಡುತ್ತಾರೆ!
ಗೆಳೆಯ ಹಾ.ರ.ನಾ.ರಾಯರಿಗೆ - ನಮಸ್ಕಾರಗಳು.
ನಿಮ್ಮ ಕೈಬರಹ ಕಂಡಾಗಲೇ ಬಂತು ಕೆಲವು ನ.ಪೈ.ಗಳಿಗೆ ಸಂಚಕಾರ ಎಂದುಕೊಂಡೆ. (ಕಳೆದ ಬಾರಿಯ postage ಸರಿಯಾಗಿತ್ತೆ?). ಒಂದು ಬಾರಿ ಬೇring ಮಾಡಬಾರದೇಕೆ? ಎಂದೆನಿಸುತ್ತದೆ. ಆದರೆ, ನನಗೇ ಹಿಂದಿರುಗಿಸಿದರೆ ಗತಿ? ನನ್ನ ವಿಳಾಸ ಬರೆಯದೆ ಕಳುಹುವ ಆಲೋಚನೆಯೂ ಬರುತ್ತಿದೆ ಒಂದೊಂದು ಬಾರಿ.
Deadline ನೆನಪು ಮಾಡಿ ಉಪಕಾರ ಮಾಡಿದಿರಿ. ಇಲ್ಲವಾದರೆ ಉತ್ತರಿಸೋಣ ಎಂದು ಸುಮ್ಮನಾಗಿ ಪತ್ರ ಪುಸ್ತಕಗಳಡಿ ಸೇರಿ ಮಾಯವಾಗುತ್ತಿತ್ತು. ಹೀಗೆಯೇ ಬರೆಯಬಹುದಿತ್ತೆನ್ನಿ - ಆದರೆ ವ್ಯಕ್ತಿ ಎದುರಿಗೇ ಕುಳಿತು ಪ್ರಶ್ನಿಸುತ್ತಿರುವಂತೆ (ಅಥವಾ ಕೆಲವು ನಿಮಿಷಗಳ ಮಿತಿಯ ದೂರವಾಣಿ ಕಾಂಡದ ಕರೆ ಮಾಡಿದಂತೆ) ಬರುವ ಸ್ವಾರಸ್ಯ ಹೀಗೇ ಬರೆದರೆ ಬರುವುದಿಲ್ಲವಲ್ಲ! ಅದಕ್ಕಾಗಿ deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು ಎಂದುಕೊಂಡು ಈಗಲೇ, ಈ ರಾತ್ರಿಯೇ (ಗಾಬರಿಯಾಗಬೇಡಿ, ಇನ್ನೂ ಹನ್ನೊಂದು ಘಂಟೆ ...) ಬರೆಯುತ್ತಿದ್ದೇನೆ.
ಇನ್ನು ಪೀಠಿಕಾ ಪ್ರಕರಣದಲ್ಲೇ ಇರುವಾಗ, ಕಚೇರಿಯ manifold ಕಾಗದವಿದೆ. (ಬಹುಶಃ ಜೇಬಿನಲ್ಲಿ ಅಂಚೆ ಚೀಟಿಯ ವ್ಯವಸ್ಥೆಗೆ ಪೈಸೆಗಳೂ ಇರಬಹುದು ...). ಕೆಲವು ಪುಟಗಳಷ್ಟಾದರೂ ಬರೆದು ತುಂಬಿಸದಿದ್ದರೆ Lineage ಸಿಗದೆ ಬಾಕಿಯಾಗಬಹುದು ಎಂದು ಭಾವಿಸಿದ್ದೇನೆ. ಒಂದೊಂದು ಬಾರಿ ನಮ್ಮೊಳಗಿನ ಪತ್ರ ವ್ಯವಹಾರದ ಕ್ರಮ (ಅಂದರೆ ನಿಮ್ಮಿಂದ ಬರುವ ಅಂತರ್ದೇಶೀಯ ಮಾರೋಲೆಗಳನ್ನು ಉದ್ದೇಶಿಸಿಯಲ್ಲ) ನೋಡುವಾಗ ನನ್ನ ‘ಧೈರ್ಯ’ಕ್ಕೆ ನಾನೇ ಬೆರಗಾಗಿ ಭೇಷೆಂದು ಬೆನ್ನು ತಟ್ಟಿಕೊಳ್ಳುವಂತಾಗುತ್ತದೆ. ‘ತಾಯಿನಾಡು’ ಕಚೇರಿಯಲ್ಲಿ Leader - writer (ದ್ವಯಾರ್ಥವೆನ್ನಿ, ಬೇಕಾದರೆ) ಆಗಿದ್ದಾಗ ಒಬ್ಬಿಬ್ಬರ ಹೊರತು ಉಳಿದವರಿಗೆ ನಾಗೇಶರಾಯರು unapproachable ಎಂಬ ಭಾವನೆ ಮೂಡಿತ್ತು. (ನಾನು ಅದಕ್ಕೆ ಹೊರತಾಗಿರಲಿಲ್ಲ). ಅಂತಹವರೊಡನೆ ಈಗ ಧೈರ್ಯವಾಗಿ ಹರಟೆಯೋಪಾದಿಯಲ್ಲಿ ಪತ್ರಿಸುವ ರೀತಿ ಕಂಡಾಗ, ನನ್ನದೊಂದು aಚೀವ್‍ಮೆಂಟ್ (ಇಲ್ಲದ ಕ್ರಮದಲ್ಲಿ ಚೀವ್‍ಮೆಂಟ್) ಇದು ಎಂದೆನ್ನಬೇಡವೆ? ಈಗಲೂ ಒಂದು ಧೈರ್ಯ - audacityಗಾಗಿ ಸಿಟ್ಟು ಬಂದು ಮುಖ ಕೆಂಪಾದರೂ ಕಾಣಿಸುವುದು ನನಗಲ್ಲವಲ್ಲ ... ಪ್ರೇಮಾ ನಾಗೇಶರಾಯರಿಗೆ ತಾನೆ? (ಹೆಸರು ತಪ್ಪಿಲ್ಲವೆಂದು ನಂಬಿದ್ದೇನೆ)
ಅಂತೆಂಬಾಗ -
ಇದೋ ಆರಂಭಿಸುತ್ತೇನೆ ಇನ್ನು. ನಿಮ್ಮ ಪತ್ರದ clause by clause consideration.
ನನ್ನ ಪತ್ರಗಳಲ್ಲಿ ಸ್ವಾರಸ್ಯವಿರುತ್ತದೆ (ಎಷ್ಟಾದರೂ ಅದು light reading matter!) ಎಂಬುದು ನನಗೆ (capitalನ) ಗೊತ್ತಿರುವುದಿಲ್ಲವೆ? ಆದರೂ dull etc. ಎನ್ನುವುದು ಸಂಪ್ರದಾಯವೆಂದು ಹಾಗೆ ಬರೆದೆ. ಆದರೆ ನಿಮ್ಮ ಬಳಿ formality - 240 ಮೈಲಿ ದೂರದಲ್ಲಿರುವಾಗ - ಬೇಡವೆಂದು ಯಾರಿಗೆ ನೆನಪಾಗಿತ್ತು! ಆದರೆ ನೀವು ಹಿಂದಿನ ಪತ್ರಕ್ಕೆ ಇತ್ತ ಮನ್ನಣೆ ನನ್ನ ತಲೆಯೊಳಗೆ ಹೋಗಿದೆ (i.e., gone into my head) ಆದರೂ ನಿಮ್ಮ ಅಂಚೆ ನಿರೀಕ್ಷೆ ತಪ್ಪಬಾರದಲ್ಲ. ನನಗಾದರೆ ಮಿತ್ರಪತ್ರಾಗಮನ ಸಂಪಾದಕರ ಪತ್ರದೊಂದಿಗೆ ಆದ ಕಾರಣ, ಅನಿರೀಕ್ಷಿತವಾಗಿ ದೊರೆವ ಆನಂದ. (ಇಂದಿನ ಪತ್ರವೂ ಹಾಗೆಯೇ ಆಗಿತ್ತು!). ನಾನು ನಿರೀಕ್ಷಿಸುವುದು ‘ಪ್ರಿಯ ಸಂಪಾದಕರೇ!’ ಸಂಬೋಧನೆ. "ಗೆ ಗೋ" ಕಾಣ ಸಿಕ್ಕಾಗ ಸಂತೋಷವಾಗುತ್ತದೆ. ಇರಲಿ, ನಿಮಗೆ monthly n / letter promise ಮಾಡಿದುದು - reciprocate ಮಾಡಿಸಿಕೊಳ್ಳುವ ಆಸೆಯಿಂದಲೇ ಸ್ವಾಮೀ! ಅದರಲ್ಲಿ ಸಂದೇಹವೇನೂ ಇಲ್ಲ. ಏಕೆಂದರೆ, ತಮ್ಮ ಬರೆದ letterಗಳು (ನನ್ನ ಉತ್ತರಗಳೂ) ಯಾವಾಗಲೂ curt; familiarity bred contempt ತುಂಬಿದುದಾಗಿರುತ್ತವೆ. ಆದರೆ, ನಿಮ್ಮಿಂದ ಕೆಲವು ಉವಾಚ (- ನಾರದ)ಗಳಾದರೂ ಸಿಕ್ಕರೆ! [ನಾಗೇಶರಾಯರು ‘ತಾಯಿನಾಡು’ ಪತ್ರಿಕೆಗೆ ಆದಿನಗಳಲ್ಲಿ ‘ಟಿಯೆಸ್ಸಾರ್’ ‘ಪ್ರಜಾವಾಣಿ’ಗೆ ಬರೆಯುತ್ತಿದ್ದಂತೆ ‘ನಾರದ ಉವಾಚ’ ದೈನಿಕ ಟೀಕಾಂಕಣ ಬರೆಯುತ್ತಿದ್ದರು - ಸಂ.] ಅದೇ ಸಂತೋಷ. ಬೆಂಗಳೂರು ತಂಗಾಳಿಯ ಆನಂದವನ್ನೇ ಅನುಭಾವಿಸಿಕೊಂಡ ಹಾಗಾಗುತ್ತದೆ. Show steal ಮಾಡುತ್ತೀರಷ್ಟೆ!
ಇನ್ನು ನನ್ನ all absorbing portfolio ವಿಚಾರ:-
ಬಹುಶಃ ನೀವು ಪತ್ರ ಬರೆಯುತ್ತೀರೆಂದು ನಮ್ಮ publisher - cum - Mg. Directorರಿಗೆ ಸೂಚನೆ ಸಿಕ್ಕಿರಬೇಕು. ಇಲ್ಲವಾದರೆ ನಿನ್ನೆಯ ದಿನವಷ್ಟೆ ನನ್ನ ಕೆಲಸದ ವ್ಯವಸ್ಥೆಯನ್ನೇಕೆ ಬದಲಾಯಿಸಿದರು. ಈಗ ಸಂಪಾದಕರ ಪತ್ರ, weekly ವಿಭಾಗಗಳೊಂದಿಗೆ undesignated News Editor ಆಗಿದ್ದೇನೆ. ಒಂದು ಉಪಕಾರವಾಗಿದೆ. Continuous night shift ಇದ್ದುದು ಹೋಗಿ temporarily continuous (ಅಂದರೆ whims ಪ್ರಕಾರ ಇದ್ದಕ್ಕಿದ್ದಂತೆ ಬದಲಾವಣೆಯಾಗಲೂ ಬಹುದು) day shiftಗೆ ಬಿದ್ದಿದ್ದೇನೆ. ಒಂದಷ್ಟು ಸಿಗರೇಟ್ ವೆಚ್ಚ ಉಳಿಯಿತಾದರೂ ಬೇರೆ ವೆಚ್ಚ ಹೆಚ್ಚಿತು. ಆದರೆ, ದಿನಕ್ಕೆ ಅರ್ಧ ಘಂಟೆಯಾದರೂ ಬಾವಟೆ ಗುಡ್ಡೆಯ ಗಾಳಿ ತಿನ್ನಬಹುದು (ಸೆಕೆ ನಿವಾರಿಸಿಕೊಳ್ಳಬಹುದು). ಸಮುದ್ರದ ಕಡೆಗೇ ನೋಡುತ್ತಿರಬಹುದು. ("ರೀ, ... ನಾನೂ" ಎನ್ನುವವರೂ ".. ಪ್ಪಾ, ನಾನೂ" ಎನ್ನುವವರೂ ಮಂಗಳೂರಿಗೆ ಬರುವ ವರೆಗಾದರೂ!). ಸದ್ಯಕ್ಕಂತೂ, T' printerನಿಂದ - ಅದರಲ್ಲಿ ಬರುವ messageಗಳೂ ಅತ್ಯಲ್ಪ - ಕಾಗದ ಹರಿದು, ರಾತ್ರಿಯವರು ಬಿಟ್ಟಿದ್ದೇನಾದರೂ (ಅದು ಬೇಕಾದಷ್ಟ್ರಿರುತ್ತದೆ) ಇದ್ದರೆ ಅವುಗಳನ್ನು ನನ್ನ shiftನಲ್ಲಿರುವವರಿಗೆ ಹಂಚಿ ಕೊಟ್ಟು, ನಾನೂ ಬರೆದು ಹಾಕಿ, list ಮಾಡಿಟ್ಟು ಸಂಜೆ (ಅಂದರೆ 7 ಘಂಟೆಗೆ ... ಇದು ನಿಮ್ಮ ಹಾಗೆ cosmopolitan centre ಅಲ್ಲ) buzz offiಸುವುದು!

ಆರಂಭದ ದಿನ office ರಾಜಕೀಯ ಇಲ್ಲೂ ತಲೆ ಎತ್ತಿತೆನ್ನಿ. ನಮ್ಮ ಕೈಯಲ್ಲೇ ಬರೆಸುತ್ತಾನೆ - ಇವನು ಏನೂ ಬರೆಯುವ ಉದ್ದೇಶ (ಬಹುಶಃ) ಇಲ್ಲದಿರಬೇಕು ಎಂದು ಭಾವಿಸಿದ್ದ ಒಬ್ಬ fastest S.E. ಮಹಾಶಯ. ಉಳಿದಿಬ್ಬರು graduate muffs - ಅವರ ಬಗ್ಗೆ no comment. ಆದರೆ, ಪತ್ರ ಕತ್ತರಿ - weekly matter (quality ಕೇಳಬೇಡಿ) ಮುಗಿಸಿ "ಬಾರೋs ಮಗನs ನಾನೇನ ನಿನ್ಕಿಂತ ಉಳಿಕಿ ಅಂದ್ಕೊಂಡಿದೀs ಏನs!" ಎಂದುಕೊಂಡೇ ಸರಿಯಾಗಿ ಗೀಚಿದೆ - number of sheets ಸಾಕಷ್ಟು ಇತ್ತು. ಈ ದಿನವೂ ಹಾಗೆಯೇ ಆದ ಕಾರಣ "ಇದು ನಾನು ಗ್ರಹಿಸಿದಷ್ಟು ಹಾಳಲ್ಲ ಮಾರಾಯ್ರೆ" ಎಂದು ಸುಮ್ಮನಾಗಿದ್ದಾನೆ. ಅವನೊಬ್ಬ good worker - ಆದರೆ, ನನ್ನಿಂದಲೂ childish, ಅಲ್ದೆ ದೋಷ. ಉಳಿದಿಬ್ಬರು Bitt-ers (ಇದೂ bar ಭಾಷೆಯಲ್ಲ!). ನಿಜವಾಗಿ ನೋಡಿದರೆ ಈ ವ್ಯವಸ್ಥೆಯೇ ಒಳ್ಳೆಯದೆಂದು ಕಾಣುತ್ತದೆ.
ನಮ್ದು ಕಾಮ್ ಹೋಗಯಾ ಎಂದು ಇದ್ದುಬಿಡಬಹುದು. ಆದರೆ ಫ್ರಂಟ್ page display ಕುಲಗೆಟ್ಟು ಹೋಗುತ್ತದೆ ಎಂದೊಂದೇ ಬೇಸರ. "ಹೂಂ, ಮಾಲಿಕರಿಗೇ ಬೇಡವಾಗಿದೆ ಅದು, ನನಗೇಕೆ ಆ ಚಿಂತೆ" ಎಂದೆನಿಸುತ್ತಿದೆ ಒಮ್ಮೊಮ್ಮೆ. ಅವರಿಗಂತೂ advt ಒಂದೇ preoccupation. Adsಗೆ ಬೇಕಾಗಿ ಇದ್ದಕ್ಕಿದ್ದಂತೆ 2 ಪುಟ ಜಾಸ್ತಿ ಮಾಡುತ್ತಾರೆ ಒಂದೊಂದು ಬಾರಿ. ಸಾಯುವವರು - ನಾವಲ್ಲ, ನಮಗಂತೂ ದಿನಾಲೂ 6 ಕಾಲಂ matter (left overs) omit ಮಾಡುವುದೇ ಕೆಲಸ - ಕಂಪಾಸಿಟರು "ಫಡ್ಚ" ಆಗುತ್ತಾರೆ. ಇಲ್ಲೂ, Leader writer & ಅರ್ಥಗರ್ಭಿತ ವಾರ್ತೆ ಲೇಖಕರು - cum - Asst Editorರ good booksನಲ್ಲಿದ್ದೇನೆ. ಆದುದರಿಂದ ಒಂದು ರೀತಿ .........
ಇನ್ನುಳಿದ ರಾಜಕೀಯ ಮುಂದೆ ಎಂದಾದರೂ -----
ನಿಮ್ಮ ಕೆಲಸದ ವಿವರ ದೊರೆತಿತು (ನನಗೆ ಅಸೂಯೆ ಮೂಡುತ್ತಿದೆ ...). ಆದರೆ moff page's loss is N.R's gain ಅಲ್ಲವೆ? Page ನೋಡಿದಾಗ ವ್ಯಾಸರಾಯರ styleನಂತೇ ಕಂಡಿತ್ತು. ಆದರಿಂದಲೇ ಹಾಗೆ ಪ್ರಶ್ನಿಸಿದ್ದೆ. ಪಾಪ! my sympathies.
ಮಥ್ತೂರರಾದರೆ ಹೊಗಳಿದುದರಲ್ಲಿ ಏನೂ ಆಶ್ಚರ್ಯವಿಲ್ಲ (professional jealousy!). ಆದರೆ, ನೀವೂ ಅವರೂ ವೆಂ.ರಾಯ ಭಾರತೀಪ್ರಿಯರೂ ಒಂದು ‘ಪಾಳಿ’ ಎಂದು ತಿಳಿದು ಅಚ್ಚರಿಯಾಗಿರ್ಪುದು. ಹಾಗಾದರೆ ಇನ್ನೊಂದರಲ್ಲಿ ಅನಂತಸುಬ್ಬರಾಯರು ಅರ್ಚಿಕರಾಗಿ ದಾನಿಯಾದರೆ? (ಬೇರಾರು ಇದ್ದಾರೆ?). ಶ್ರೀ ಕಲ್ಕಿಯವರಿಗೆ ಕರೆನಾಡ ಕನ್ನಡಿಗನ ‘ವಣಕ್ಕಂ’ ಒಂದು ಹೇಳಿಬಿಡಿ - ಮರೆಯದೆ ಮತ್ತೆ. Better luck next timeನ ವಿಷಯ ಇಲ್ಲಿಯ ರಾಜಕೀಯದಲ್ಲಿ, next time ಅದು ನನ್ನ ಕೈಗೆ ಸಿಗುವುದೋ ಇಲ್ಲವೊ! ಈಗಾಗಲೇ ಅದು ಬಹಳ ಸುಲಭ ಕೆಲಸವೆಂದುಕೊಂಡು aspire ಮಾಡುತ್ತಿರುವ candidates (ಕ್ಯಾಂಡಿ ಡೇಟ್ಸ್)ಗಳಿಗೇನೂ ಕಡಿಮೆ ಇಲ್ಲ. ಅದು ಹೊರಟು ಹೋದರೆ ನನಗೇನೂ regrets ಇಲ್ಲವೆನ್ನಿ.
ನಿಮ್ಮ 'd' class implementationನ ನಿರೂಪಣೆ ನೋಡಿದರೆ, ಎಲ್ಲಿ ಕಾಫಿ ಕೊಡಬೇಕಾಗುವುದೋ ಎಂಬ ಭಯದಿಂದ report ಮಾಡಿದ ಹಾಗೆನಿಸುತ್ತಿದೆ. ನಿಮಗೂ ವರ್ಷ ತುಂಬಿರಬೇಕಲ್ಲ? ಅಥವಾ ಇನ್ನೂ ತಿಂಗಳುಗಳಲ್ಲೇ ಇದ್ದೀರಾ? (ಇರಲಾರದು. ನೀವೂ preliminary recruitment cadreಗೆ ಸೇರಿದವರು ತಾನೆ?) ಇರಲಿ, ಹೇಗಿದ್ದರೂ ಬೆಂಗಳೂರಿಗೆ ಬಂದಾಗ ವಸೂಲು ಮಾಡಿಯೇ ಮಾಡುತ್ತೇನೆ. ಅಥವಾ ನೀವಿಲ್ಲಿ ಬಂದಾಗ ಒಂದು ದಿನ - ಮಂಗಳೂರು MTR ಎನಿಸಿದ ‘ಮೋಹಿನಿ ವಿಲಾಸ’ದಲ್ಲಿ ಕೊಡಿಸಿ. ಆದರೆ, Bill 400% ಹೆಚ್ಚಾಗಬಹುದು (ನಾಲ್ಕು ಜನರಾಗುವ ಕಾರಣ). ನಿಮ್ಮ hope (for the better) materialise ಆಗಲಿ ಎಂದು ನಾನೂ ಹಾರೈಸುತ್ತಿದ್ದೇನೆ. ಏಕೆಂದರೆ, ಅದೊಂದು chain publication experiment fail ಆದರೆ ಶ್ರೀ S.V. (V.S. ಅಲ್ಲ) Kudva ಅವರ ದ್ವೈವಾರ್ಷಿಕ ಯೋಜನೆಯೂ ತಲೆಕೆಳಗಾಗಬಹುದು. ಏಕವರ್ಷವಾಗಿದ್ದುದು ಮತ್ತೂ ಒಂದು ವರ್ಷ ಮುಂದುವರಿಯಲು ನಿಮ್ಮ ‘ರಾಯ’ರೇ ಕಾರಣರೆಂಬೊಂದು ಸುದ್ದಿ ಇರುವುದಾಗಿ ತಿಳಿದು ಬಂದಿದೆ.
ಗೃಹಶೋಧನೆ ಈಗ ಒಂದು ಹಂತಕ್ಕೆ ಮುಟ್ಟಿದೆ. ಎಲ್ಲರ ನಸೀಬೂ ಸರಿಯಾಗಿದ್ದರೆ ಇದ್ದಕ್ಕಿದ್ದ ಹಾಗೆ ಒಂದು p.c. ನಿಮ್ಮ ಕೈಸೇರಲೂ ಬಹುದು. ಒಬ್ಬನ ಕೈಗೆ ರೊಕ್ಕವಂತೂ ಎಣಿಸಿದ್ದೇನೆ. ಅವನು ಕೊಟ್ಟರೇ ಸರಿ - ಇಲ್ಲವಾದರೆ ಹಣವಾದರೂ ಮರಳಿ ಬರುತ್ತದೆ. ಮನೆ ದೊರೆತರೆ ಆಯಿತಲ್ಲಾ ----
ಆದರೆ, ಷರತ್ತಿನಿಂದ ಹಿಂದೆಗೆಯುವುದಿಲ್ಲ, ಖಂಡಿತವಾಗಿಯೂ! ವಿಧಾನಸೌಧ ತೋರಿಸದಿದ್ದರೇನಂತೆ ...... (ಎಂದಾದರೂ ನೋಡಬಹುದು) ಕಾಣಿಸಬಾರದೆ? ಒಂದೊಂದು ಬಾರಿ ಇಲ್ಲಿನ ಸೆಕೆಯನುಭವಿಸಲೇಬೇಕು. "ನಮ್ಮ ಬೆಂಗ್ಳೂರೇ ವಾಸಿ ಅಲ್ಲವೇನ್ರೀ ..." ಎನಿಸಿಕೊಳ್ಳಬೇಕು. "ಜಗಲಿ ಹಾರದೆ ಇದ್ದರೂ ಗಗನ ಹಾರಲಾಗದೆ?" TTK (ಉರ್ಫ್ ಮೊರಾರ್ಜಿ) ಕೃಪೆಯೂ ’pagoda' ನೋಡುವ ಹಟ ಮೂಡಿದಾಗ ಆಗಬಹುದು. ಅಷ್ಟು ಸಾವಿರ ತಾಪತ್ರಯವಿದ್ದ K.A.S.ರಾಯರೇ ಕರಾವಳಿ ಯಾತ್ರೆ ಮಾಡಿದ್ದರಂತೆ, ಅವರಷ್ಟೇ ತಾತ್ರಯಗಳಿರುವ ನಾಗೇಶರಾಯರಿಗೇಕೆ ಸಾಧ್ಯವಾಗಬಾರದು? ಮರೆತೆ, ನೀವಂತೂ ಬರುವ ಸೂಚನೆ ಕೊಟ್ಟಿದ್ದೀರಲ್ಲ, ಇನ್ನೇಕೆ ‘ಶೆಟ್ಟರ ಒತ್ತಾಯ?’ ಕಾರ್ಡಿನ ನಿರೀಕ್ಷೆಯಲ್ಲಿರಿ.
ಇಲ್ಲಿಗೆ, I am nearing the end ಎನ್ನಬಹುದು. ಆದರೆ ಇನ್ನೂ ಒಂದು sheet ಬಾಕಿ ಇದ್ದು, ಕೇಳುವ ಒಂದು ಮಾತಿದೆ. ಆದ್ದರಿಂದ, ಕೈ ಸೋಲುತ್ತಿದ್ದರೂ ಕೇಳಿ ಬಿಡುವೆ.
‘ರಾಮೇಶ್ವರದಿಂದ ಕನ್ಯಾಕುಮಾರಿ’ ಎಂದಿರಿ. ಅದೇನು slip of ...... ಗೆ? ಅಥವಾ deliberate ಎಂದಾದರೆ, ಅಲ್ಲಿನ humour catchiಸಲು ಸಾಧ್ಯವಾಗಲಿಲ್ಲ. ತಿಳಿಸುತ್ತೀರಾ?
ನಮ್ಮಲ್ಲಿನ ಅಧಿಕೃತ ಭಾಷೆ - ಮೇಲ್ಮಟ್ಟದ ಅಧಿಕಾರಿ ವರ್ಗದಲ್ಲಿ (administrative) ಕೊಂಕಣಿ. Interdepartmental ಮಟ್ಟದಲ್ಲಿ: ಇಂಗ್ಲಿಷ್. Editorialನಲ್ಲಿ ಕನ್ನಡ. Ed. Deptನ ಕೆಲವು membersನೊಳಗೆ: ತುಳು. ನವಭಾರತ ಮತ್ತು local PTIಗಳೊಳಗೆ: ಮಲೆಯಾಳ. ಹಾಗಿರುವ ಪಂಚಭಾಷಾ ಪ್ರದೇಶ - ಈ newspaper publisher's (P) Ltd. ಅದೇಕೆ ಕೇಳಿದಿರಿ? ವಿಶೇಷವೇನಾದರೂ ಇತ್ತೆ?
ಇನ್ನೇನು ಬರೆಯಲೀಗ? ಇಂದು ಇಂದಿರಾ ಪ್ರಿಯದರ್ಶಿನಿಯನ್ನು ಇನ್ನೊಂದು ಬಾರಿ HK ವೀರಣ್ಣಗೌಡರ ಪಕ್ಕದಲ್ಲಿ ಕಂಡೆ. (ಪತ್ರಿಕಾ ಪ್ರತಿನಿಧಿಯಾಗಿಯಲ್ಲ - ಸಾರ್ವಜನಿಕನಾಗಿ). ಅದೇ matter - ಮೊದಲಿನ ಭಾಷಣಗಳದೇ stereo. ಆದರೆ, ‘ವ್ಹಾ ಬುಡ್ಢಿ, ಖೂಬ್‍ಸೂರತ್ ಹೈ’ ಎಂದೊಬ್ಬ ಸಾಬಿ ನುಡಿದ. ನಾನೂ ಮೌನಧ್ವನಿ ಕೂಡಿಸಿದೆ, ಆ ಮಾತಿಗೆ ತಪ್ಪೆ?
ಕಂಠೀರವನಿಗೆ ಶುಭಾಶಯಗಳನ್ನು ತಿಳಿಸುವ ಕೆಲಸವನ್ನು ನಾಡಿದ್ದು ಸೋಮವಾರ ಊರಿಗೆ ಅಂದರೆ - ಅಡ್ಯನಡ್ಕ ಎಂಬಲ್ಲಿಗೆ - ಹೋದಾಗ ಮಾಡುತ್ತೇನೆ, ಆಗದೆ?
ನನ್ನ pages ಪೂರ್ತಿಯಾಯಿತು. (ಕೊನೆಗೆ double leads ಮಾಡಿದ್ದೇನೆ - ಇರಲಿ.) ನಿಮ್ಮ ಕಾಲಂ ಬರುವುದು ಯಾವಾಗ?
ಕ್ಷೇಮ ತಾನೆ?
ನಿಮ್ಮ,
ಪಗೋ27/11
ಕೊನೆಯ ಒಂದು ಸಂದೇಹ:
ಈ ರೀತಿಯಾಗಿ ಬಂದು ತೆಳು ಕಾಗದದ ಪತ್ರಗಳನ್ನು (ಓದದಿದ್ದರೂ) ನೋಡಿ, ಶ್ರೀಮತಿ ನಾಗೇಶರಾಯರು ಸಂದೇಹಗ್ರಸ್ತರಾಗಲಾರರಷ್ಟೆ?
ಪಗೋ

----

Friday, May 08, 2009


ರಂಗನಾಥರಾಯರಿಗೆ ಖಾದ್ರಿ ಪ್ರಶಸ್ತಿ


ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥ ರಾವ್ ಅವರಿಗೆ ಈ ವರ್ಷದ ಖಾದ್ರಿ ಶಾಮಣ್ಣ ಪ್ರಶಸ್ತಿಯ ಗೌರವ ಸಂದಿದೆ. ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ೧೯೬೨ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜಿ.ಎನ್.ಆರ್. ಮುಂದೆ ‘ಪ್ರಜಾವಾಣಿ’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಔನ್ನತ್ಯ ಸಾಧಿಸಿದ ಜಿ.ಎನ್.ಆರ್. ಆ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು. ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ, ಸುಧಾ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು. ಅವರ ಒತ್ತಾಸೆಯಿಂದಲೇ ನಾನು ‘ಸುಧಾ’ ಯುಗಾದಿ ವಿಶೇಷಾಂಕಕ್ಕೆ (೨೦೦೦) ‘ಇಂಟರ್‌ನೆಟ್ ಎಂಬ ಮಾಯಾಜಾಲ’ ಎಂಬ ಅಂತರ್ಜಾಲ ಕೈಪಿಡಿಯನ್ನು ರಚಿಸಿದ್ದು. ಹಾಗೆಯೇ ‘ವಿಜ್ಞಾನಕ್ಕೊಂದು ಬೆಳಕಿಂಡಿ’ಯ ಮೂಲಕ ನನ್ನನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಂಕಣಕಾರನಾಗಿ ಪರಿಚಯಿಸಿದರು.
ಜಿ.ಎನ್.ಆರ್. ಅವರದು ಬಹುಮುಖ ಪ್ರತಿಭೆ. ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿ, ವಿಡಂಬನಾ ಬರಹ, ಕತೆಗಳನ್ನು ರಚಿಸಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ, ವಿಮರ್ಶೆಗಳನ್ನು ಮಂಡಿಸಿದ್ದಾರೆ. ಕಾವ್ಯಪ್ರೇಮಿಯಾದ ಜಿ.ಎನ್.ಆರ್. ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ಕಾಲೇಜುಗಳಲ್ಲಿ ಬೋಧಿಸುವುದರ ಜತೆಗೆ ಅವರ ಅನುಕೂಲಕ್ಕೆ ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಹಾಜರಿ ಹಾಕುವ ಜಿ.ಎನ್.ಆರ್. ತಮ್ಮ ಆಪ್ತ ಲೇಖಕ ಬಳಗಕ್ಕೆ ಸ್ಫೂರ್ತಿ ತುಂಬುವ ಸಹೃದಯಿ.
ಅವರ ವೃತ್ತಿಜೀವನದ ಆರಂಭದ ದಿನಗಳು ಹೇಗಿದ್ದವು? ಎಂಬುದನ್ನು ‘ಸುದ್ದಿಜೀವಿ’ ಎಂಬ ಹೆಚ್.ಆರ್.ನಾಗೇಶರಾವ್ [ಸಂಯುಕ್ತ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕರು] ನೆನಪಿನ ಹೊತ್ತಿಗೆಗೆ ಬರೆದ ಲೇಖನದಲ್ಲಿ ಜಿ.ಎನ್.ಆರ್. ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಆ ಲೇಖನದ ಆಯ್ದ ಭಾಗಗಳು ನಿಮ್ಮ ಓದಿಗೆ ......
-------
ಸಂಕ ಎಂದರೆ ಮಲೆನಾಡಿನಲ್ಲಿ ಸೇತುವೆ, ನಮ್ಮನ್ನು ಮುಂದಕ್ಕೆ ದಾಟಿಸುವ ಮಾರ್ಗ. ಇದು ನಾವೆಲ್ಲ ಬಲ್ಲ ಅರ್ಥ. ಆದರೆ ಕನ್ನಡದ ಪತ್ರಿಕಾ ಪಾರಿಭಾಷಿಕ ನಿಘಂಟಿನಲ್ಲಿ ಇದಕ್ಕೆ ಬೇರೊಂದು ಅರ್ಥ ಕಾಣಿಸಿಕೊಂಡರೆ ನೀವು ಹುಬ್ಬೇರಿಸಬೇಕಿಲ್ಲ.
ಏಕೆಂದರೆ ನಮ್ಮಲ್ಲಿ ಹಳೆಯ ತಲೆಮಾರಿನ ಪತ್ರಕರ್ತರಿಗೆ ‘ಸಂಕ’ ಎಂದರೆ ‘ಸಂಯುಕ್ತ ಕರ್ನಾಟಕ’ ಎಂದೇ ಅರ್ಥ.
ನಾನು ‘ಸಂಕ’ದ ಬಾಗಿಲಲ್ಲಿ ನಿಂತದ್ದು 1962ರಲ್ಲಿ. ಆಗ ರಂಗನಾಥ ದಿವಾಕರರು ಅದರ ಸಂಪಾದಕರು. ಆರ್.ಕೆ.ಜೋಶಿ ಸ್ಥಾನಿಕ ಸಂಪಾದಕರು. ಸುರೇಂದ್ರ ದಾನಿ ಸುದ್ದಿ ಸಂಪಾದಕರು. ಕೆ.ಶಾಮರಾಯರು ಪ್ರಧಾನ ವರದಿಗಾರರು.
‘ಸಂಕ’ ಎಂದ ಕೂಡಲೇ ಮೊದಲು ನನಗೆ ನೆನಪಾಗುವ ಎರಡು ಹೆಸರುಗಳೆಂದರೆ ಹೆಚ್.ಆರ್.ನಾಗೇಶರಾವ್ ಮತ್ತು ಕೆ.ಅನಂತಸುಬ್ಬರಾವ್. ಇಬ್ಬರದೂ ಸಜ್ಜನಿಕೆಗೆ ಸಾಕಾರವಾದ ವ್ಯಕ್ತಿತ್ವ. ಇಬ್ಬರೂ ತಂಪು ಹೊತ್ತಿನಲ್ಲಿ ನೆನೆಯಬೇಕಾದ ಹೆಸರುಗಳು.
‘ಸಂಕ’ದಲ್ಲಿ ನನ್ನ ಓರಿಗೆಯವರೆಂದರೆ ಜಿ.ಎಸ್.ಸದಾಶಿವ. ಸ್ವಲ್ಪ ಚಿಕ್ಕವನು ಕೆ.ಎಸ್.ಅಚ್ಯುತನ್. ಸದಾಶಿವ ನನಗಿಂತ ಸ್ವಲ್ಪ ಮೊದಲು ಸೇರಿದವರು. ಅಚ್ಯುತ ನಂತರ ನಮ್ಮನ್ನು ಸೇರಿಕೊಂಡವನು. ಆದರೆ ಇಬ್ಬರೂ ನನಗಿಂತ ಮೊದಲೇ ‘ಸಂಕ’ ದಾಟಿದವರು. ಯುವ ಪಾಳೆಯದ ಇನ್ನಿಬ್ಬರು ರಂಗನಾಥ್ ಮತ್ತು ಪಿ.ಆರ್.ನಾರಾಯಣರಾವ್. ಇನ್ನು ಅರ್ಚಕ ವೆಂಕಟೇಶ, ವ್ಯಾಸರಾವ್, ವಿ.ಅರ್.ಶ್ಯಾಮ್ (ಇಂದಿರಾತನಯ), ಎನ್.ವಿ.ಜೋಶಿ ನಮ್ಮ ಸೀನಿಯರ್ಸ್. ನಾಗೇಶರಾವ್ ನಾನು ಸೇರಿದಾಗ ಚೀಫ್-ಸಬ್ ನ್ಯೂಸ್ ಡೆಸ್ಕಲ್ಲಿ.
‘ಸಂಕ’ದ ಮಣ್ಣಿನ ಗುಣವೋ, ಏನೋ? ಅಲ್ಲಿ ಆಗಾಗ ಕಂಪನಗಳಾಗುತ್ತಿದ್ದವು. ನಾನು ಸೇರಿದ ಕೆಲವೇ ದಿನಗಳಲ್ಲಿ ಅಂಥ ಒಂದು ಕಂಪನವಾಗಿ ಆರ್.ಕೆ.ಜೋಶಿ ಮತ್ತು ದಾನಿ ತೌರಿಗೆ (ಹುಬ್ಬಳ್ಳಿಗೆ) ವಾಪಸಾದರು. ಈ ಎರಡು ಕುರ್ಚಿಗಳಿಗೆ ಶಾಮರಾವ್ ಮತ್ತು ನಾಗೇಶರಾವ್ ಅಗತ್ಯ ಕಂಡು ಬಂದಿರಬೇಕು. ನಾಗೇಶರಾವ್‍ಗೆ ಇದು ಬಡ್ತಿಯೊ, ಏನೊ ತಿಳಿಯಲಿಲ್ಲ. (ಏಕೆಂದರೆ ಆಗೆಲ್ಲಾ ಬಡ್ತಿ ಎಂದರೆ ಕೇವಲ ಜುಟ್ಟಿಗೆ ಮಲ್ಲಿಗೆ ಹೂವಷ್ಟೆ). ಆದರೂ ಸುದ್ದಿ ಸಂಪಾದಕರಾಗಿ ನಾಗೇಶರಾವ್ ನಮಗೆ ಅಂದಿನಿಂದ ಹೆಚ್ಚು ಹತ್ತಿರದವರಾದರು
ಅಂದು ‘ಸಂಕ’ದ ಸಂಪಾದಕೀಯ ವಿಭಾಗ ನಾಲ್ಕು ಗೋಡೆಗಳ ಮಧ್ಯದ ಒಂದು ದೊಡ್ಡ ಹಜಾರ. ಜೈಲಿನಂಥ ದೊಡ್ಡ ಗೋಡೆಗಳು. ಗವ್ ಎಂದು ಕವಚಿಕೊಳ್ಳುವಂಥ ದಟ್ಟ ನೀಲಿ ಬಣ್ಣದ ಗೋಡೆಗಳು. ಈ ಹಜಾರಕ್ಕೆ ಮುಂದುಗಡೆ ಹೆಬ್ಬಾಗಿಲು ಮತ್ತು ಪಕ್ಕದಿಂದ ಎರಡು ಕಡೆ ಪ್ರವೇಶಾವಕಾಶ. ಮುಂಬಾಗಿಲಿನಲ್ಲಿ ರಂ.ರಾ.ದಿವಾಕರರ ಕಚೇರಿ. ಹಾಗಾಗಿ ಆ ಕಡೆಯಿಂದ ಸಂಪಾದಕೀಯಕ್ಕೆ ಪ್ರವೇಶವಿಲ್ಲ. ಪಕ್ಕದ ಒಂದು ಬಾಗಿಲಿನಿಂದ ಪ್ರವೇಶಿಸಬೇಕಾದರೆ ಶಾಮರಾಯರ ಚೇಂಬರ್ ಮೂಲಕವೇ ಬರಬೇಕು. ಇನ್ನೊಂದು ಬಾಗಿಲಿನಿಂದಾದರೆ ಕಂಪೋಜಿಂಗ್ ದಾಟಿ ಬರಬೇಕಿತ್ತು. ನಾವೆಲ್ಲ ಕಂಪೋಜಿಂಗ್ ಮೂಲಕವೇ ಹೋಗಿ-ಬಂದು ಮಾಡುತ್ತಿದ್ದೆವು. ಈ ಎರಡು ಬಾಗಿಲ ಹೊರತು ಸಂಪಾದಕೀಯ ವಿಭಾಗಕ್ಕೆ ಕಿಟಕಿಗಳಾಗಲಿ, ಬೆಳಕಿಂಡಿಗಳಾಗಲಿ, ವಾತಾಯನಗಳಾಗಲಿ ಇರಲೇ ಇಲ್ಲ. ಎಲ್ಲ ಕಡೆಯಿಂದ ಬರುವ ಗಾಳಿ-ಬೆಳಕನ್ನು ಸ್ವೀಕರಿಸುವ ಧ್ಯೇಯದಲ್ಲಿ ಆ ಮಠಕ್ಕೆ ನಂಬಿಕೆ ಇದ್ದಂತಿರಲಿಲ್ಲ. ಹೊರಗಿನ ಬೆಳಕಿಗೆ ಗಡಿಪಾರು, ಕತ್ತಲು ಕವಿದ ಪ್ರಪಂಚದಲ್ಲಿ ಟ್ಯೂಬ್ ಲೈಟುಗಳದೇ ಎಲ್ಲ ಕಾರುಬಾರು, ಎಲ್ಲ ಪಾರುಪತ್ಯೆ. ಕತ್ತು ತಗ್ಗಿಸಿ ಬರೆಯುವುದಷ್ಟೇ ನಮ್ಮ ಕೆಲಸ. ಕತ್ತೆತ್ತಿದರೆ ಶಾಮರಾಯರ ದುರಾಗ್ರಹ ದೃಷ್ಟಿಗೆ ಢಿಕ್ಕಿ ಹೊಡೆಯುವ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಹೆದರಿಕೆ! ಇಂಥ ದಯನೀಯ ವಾತಾವರಣದಲ್ಲಿ, ನಾಗೇಶರಾಯರ ಇರುವಿಕೆಯೇ ಹಿತಕರವಾಗಿರುತ್ತಿತ್ತು.
ನಾಗೇಶರಾಯರದು ಪತ್ತೇದಾರಿ ಕಣ್ಣುಗಳು. ಕೈ ಖಾಲಿಯಾಗಿ, ಬಿಡುಬೀಸಾಗಿ ಕುಳಿತ ಉಪಸಂಪಾದಕರಿಗೂ ಅವರಿಗೂ ಗಳಸ್ಯ-ಕಂಠಸ್ಯ! ಆಪ್ತವಾಗಿ ಕುಶಲೋಪರಿ ವಿಚಾರಿಸುತ್ತಲೇ ಕೈಗೆ ಕೆಲಸ ಕೊಡುತ್ತಿದ್ದರು. ‘ನಿಧಾನವಾಗಿ ಮಾಡಿ, ಅರ್ಜೆಂಟೇನೂ ಇಲ್ಲ’ ಎಂದು ಹೇಳಲು ಮರೆಯುತ್ತಿರಲಿಲ್ಲ. ‘ನಾವು ಬುದ್ಧಿಜೀವಿಗಳು, ನಮ್ಮನ್ನು ಕೂಲಿಯವರ ಥರಾ ನಡೆಸಿಕೊಳ್ಳುತ್ತಿದ್ದಾರಲ್ಲ’ ಎಂದು ನಮಗೆಲ್ಲ ಒಳಗೊಳಗೇ ಕೋಪ. ಕೆಲವರು ಅವರಿಗೆ ‘ಮೇಸ್ತ್ರಿ’ ಎಂಬ ಅಭಿದಾನವನ್ನೂ ಕೊಟ್ಟುಬಿಟ್ಟಿದ್ದರು. ನಾಗೇಶರಾಯರಿಗೆ ನಮ್ಮ ಅಸಮಧಾನ ಗೊತ್ತಿದ್ದರೂ ನಕ್ಕು ಬಿಡುತ್ತಿದ್ದರು. ಶಾ.ರಾ.ರು ಯಾವಾಗ ಬೇಕಾದರೂ ತಮ್ಮ ಕೊಠಡಿಯ ರೆಕ್ಕೆ ಬಾಗಿಲು ತೆಗೆದು ನೋಡಿದಾಗ ಉಪಸಂಪಾದಕರೆಲ್ಲ ಕತ್ತು ತಗ್ಗಿಸಿ ಬರೆಯುತ್ತಿರಬೇಕು. ಇಲ್ಲವಾದಲ್ಲಿ ನಾಗೇಶರಾಯರಿಗೆ ಬುಲಾವ್. ಖಾಲಿ ಕೈ ಉಪಸಂಪಾದಕನಿಂದ ಅನುವಾದಿಸಲು ‘ಸ್ಟೇಟ್ಸ್‍ಮನ್’ ಪತ್ರಿಕೆಯ ಸಂಪಾದಕೀಯ ಪುಟದ ಲೇಖನ ಕಳುಹಿಸುತ್ತಿದ್ದರು. ಅಂದು ಅವನು ಆ ಲೇಖನ ಅನುವಾದಿಸಿಯೇ ಮನೆಗೆ ಹೋಗಬೇಕು. ಅದಕ್ಕೆ ಮುನ್ನ ಪಾಳಿ ಮುಗಿದರೂ ಹೋಗುವಂತಿಲ್ಲ. ಶಾ.ರಾ. ಹದ್ದಿನ ಕಣ್ಣಿನಿಂದ ಪಾರಾಗಲು ಕೈ ಖಾಲಿಯಿದ್ದಾಗ ಸಹೋದ್ಯೋಗಿಗಳು ಕೆಲವರು ‘ಶ್ರೀ ರಾಮ ನಾಮ’ ಬರೆಯುತ್ತಿದ್ದುದೂ ಉಂಟು. ಶಾ.ರಾ. ಹದ್ದಿನ ಕಣ್ಣುಗಳಿಂದ ತಪ್ಪಿಸಲೆಂದೇ ನಾಗೇಶರಾಯರು ನಮ್ಮ ಕೈ ಬರಿದಾಗಿರದಂತೆ ನೋಡಿಕೊಳ್ಳುತ್ತಿದ್ದರು. ಬೆಳಗಿನ ಪಾಳಿಯಲ್ಲಿ ಇದು ಸಾಮಾನ್ಯವಾಗಿರುತ್ತಿತ್ತು. ‘ನಿಧಾನವಾಗಿ ಮಾಡಿ, ಅರ್ಜೆಂಟಿಲ್ಲ’ ಎಂದು ನಾಗೇಶರಾಯರು ಪಿಸುಗುಟ್ಟುತ್ತಿದ್ದುದರ ರಹಸ್ಯ ನಮಗೆ ಕ್ರಮೇಣ ಗೊತ್ತಾಯಿತು. ಆತುರದ ತೀರ್ಮಾನಕ್ಕೆ ಬಂದವರು ನಾಚಬೇಕಾಯಿತು.
ನಾಗೇಶರಾಯರು ಮೃದು ಭಾಷಿ ಮತ್ತು ಮಿತ ಭಾಷಿ. ಟೀಕೆ, ನಿಂದನೆ, ಭರ್ತ್ಸನೆಗಳು ಅವರ ಬಾಯಿಂದ ಕೇಳಿ ಬರುತ್ತಲೇ ಇರಲಿಲ್ಲ. ಬೇರೆಯವರದಕ್ಕೆ ಅವರೂ ಕಿವುಡಾಗಿರುತ್ತಿದ್ದರು. ಹಾಗೆಂದು ನಿರ್ಲಿಪ್ತರೂ ಅಲ್ಲ, ಹೇಳಬೇಕಾದುದ್ದನ್ನು ಹೇಳಿಯೇ ಹೇಳುತ್ತಿದ್ದರು. ಅವರ ಕ್ವಿನೈನ್ ಲೇಪಿತ ಸೌಮ್ಯ ನುಡಿಯ ಸವಿ, ಸಿಹಿ ಮುಗಿದ ಮೇಲೆ ಅನುಭವಕ್ಕೆ ಬರುತ್ತಿತ್ತು. ಹಾಗೆಂದು ಸುಖಾಸುಮ್ಮನೆ ಹೊಗಳಿದವರೂ ಅಲ್ಲ, ಮಾತಿನಂತೆ ಕೆಲಸದಲ್ಲೂ ಶಿಸ್ತು, ಅಚ್ಚುಕಟ್ಟು. ಸಹೋದ್ಯೋಗಿಗಳಿಂದಲೂ ಇದೇ ಸಮಯ, ಶಿಸ್ತುಗಳನ್ನು ನಿರೀಕ್ಷಿಸುತ್ತಿದ್ದರು.
ಒಮ್ಮೆ ಸಂಪಾದಕೀಯ ವಿಭಾಗದಲ್ಲಿ ಕೊಂಚ ಕಂಪನವಾಯಿತು. ಅಂದರೆ ಸ್ವಲ್ಪ ಬದಲಾವಣೆಗಳು. ಈ ಬದಲಾವಣೆಗಳು ಶಾ.ರಾ. ಮೂಗಿನ ನೇರಕ್ಕಿದ್ದು, ಇದರಿಂದ ಕೆಲವರಿಗೆ ಅಸಮಾಧಾನವಾಗಿತ್ತ್ತು. ಆಗ ನನಗೆ ರಾತ್ರಿ ಪಾಳಿ. ಮರುದಿನ ಒಂದು ಪ್ರಮುಖ ಸುದ್ದಿ ‘ಸಂಕ’ದಲ್ಲಿ ಬರಲಿಲ್ಲ. ಬೆಳಿಗ್ಗೆ ಹತ್ತರ ಸಮಯ. ನಾನು ಅದೇ ತಾನೆ ಎದ್ದಿದ್ದೆ. ಶಾ.ರಾ.ರಿಂದ ಮನೆಗೇ ಬುಲಾವ್. ‘ಈ ಕ್ಷಣ ಕರೆದುಕೊಂಡು ಬಾ’ ಎಂದು ಕಾರು ಕಳುಹಿಸಿದ್ದರು. ಡ್ರೈವರ್ ನೇರವಾಗಿ ಶಾ.ರಾ. ಮನೆಗೆ ಕರೆದುಕೊಂಡು ಹೋದ. ಕೋಪದಿಂದ ಕೆಂಡಾಮಂಡಲವಾಗಿದ್ದ ಶಾ.ರಾ. ಪಡಸಾಲೆಯಲ್ಲೇ ಕೋರ್ಟ್ ಮಾರ್ಶಲ್ ಶುರು ಮಾಡಿದರು. ‘ನನ್ನ ವಿರುದ್ಧ ನಿಲ್ಲೋ ಅಷ್ಟು ಧೈರ್ಯ ಬಂತೆ, ನಿನಗೆ’? ಎಂದೆಲ್ಲ ಎದುರು ನಿಂತ ನನ್ನ ಮೇಲೆ ಹರಿಹಾಯ್ದ್ರರು. ತಾತ್ಪರ್ಯ ಇಷ್ಟೆ. ಹಿಂದಿನ ದಿನದ ಬದಲಾವಣೆಗಳಿಂದ ಅಸಮಾಧಾನ ಹೊಂದಿದ್ದ ನಾನು ಆ ಮಹತ್ವದ ಸುದ್ದಿಯನ್ನು ತಮ್ಮ ಗಮನಕ್ಕೆ ತರಲಿಲ್ಲವೆಂದೂ, ಅದನ್ನು ಬರೆದುಕೊಡಲಿಲ್ಲವೆಂದೂ, ಆಗ ಮುಖ್ಯ ಉಪಸಂಪಾದಕರಾಗಿದ್ದವರು ನನ್ನ ಕುತ್ತಿಗೆಗೆ ಲೋಪವನ್ನು ಕಟ್ಟಿ ಬೀಸುವ ದೊಣ್ಣೆಯಿಂದ ಅವರು ಪಾರಾಗಿದ್ದರು. ವಾಸ್ತವದಲ್ಲಿ ನಾನು ಆ ಸುದ್ದಿಯನ್ನು ಮುಖ್ಯ ಉಪಸಂಪಾದಕರ ಗಮನಕ್ಕೆ ತಂದಿದ್ದರೂ ಅದೇನು ಅಂಥಾ ಮಹತ್ವದ ಸುದ್ದಿಯಲ್ಲವೆಂದು ಅವರು ಬದಿಗೆ ತೆಗೆದಿಟ್ಟಿದ್ದರು. ನನ್ನ ವಿವರಣೆ, ಸಮಜಾಯಿಷಿ ಯಾವುದನ್ನೂ ಶಾ.ರಾ. ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಸ್ವಹಸ್ತದಲ್ಲಿ ಸಹಿ ಹಾಕಿ ನೋಟೀಸನ್ನೂ ನೀಡಿದರು.
ನಾನು ನಾಗೇಶರಾಯರಿಗೆ ಎಲ್ಲವನ್ನೂ ತಿಳಿಸಿ, ‘ನಾನು ತಪ್ಪು ಮಾಡಿಲ್ಲ. ನನಗೆ ನೋಟೀಸ್ ಕೊಟ್ಟಿರೋದು ನ್ಯಾಯವಲ್ಲ, ಅದಕ್ಕೆ ನಾನು ಉತ್ತರ ಕೊಡುವುದಿಲ್ಲ’ ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ನನ್ನ ಮಾತನ್ನು ಸಾವಧಾನದಿಂದ ಕೇಳಿಸಿಕೊಂಡ ನಾಗೇಶರಾಯರು -
‘ಅಷ್ಟೇ ತಾನೆ ಬಿಡಿ, ಅದೊಂದು ಸಣ್ಣ ಕಿಡಿ’ ಎಂದರು.
‘ಸಣ್ಣದೇನು ಬಂತು ಸರ್, ಸುಡ್ತಿದೆಯಲ್ಲ’ ಎಂದೆ.
‘ಇಲ್ಲ, ಸುಡುವ ಶಕ್ತಿ ಅದಕ್ಕಿಲ್ಲ. ಅದೊಂದು ಸಣ್ಣ ಕಿಡಿ. ಸಣ್ಣದು’ ಎಂದು ಒತ್ತಿ ಹೇಳಿದರು.
ನಾನು ಮತ್ತಷ್ಟು ನೊಂದುಕೊಂಡು, ಇವರಿಂದ ನನಗೆ ಸಹಾಯವಾಗದೆಂದು ಹತಾಶನಾದೆ. ಮುಂದಿನದನ್ನು ಎದುರಿಸಲು ಸಿದ್ಧನಾದೆ. ಕೆಲಸ ಹೋಯಿತು ಎಂದು ಕೊಂಡು ಆ ಅಂತಿಮ ಕ್ಷಣಕ್ಕಾಗಿ ಎದುರು ನೋಡುತ್ತಾ ಕುಳಿತೆ.

ಹದಿನೈದು ದಿನ ಕಳೆದು ತಿಂಗಳಾಯಿತು. ಆ ಅಂತಿಮ ಕ್ಷಣ ನನಗೆ ಬರಲೇ ಇಲ್ಲ.ಕಾರಣ ನಂತರ ತಿಳಿಯಿತು. ಹಿಂದಿನ ದಿನದ ಬದಲಾವಣೆಯಿಂದ ತನಗೇ ಅಸಮಾಧಾನವಾಗಿತ್ತೆಂದು ನನ್ನ ವಿರುದ್ಧ ದೂರು ಕೊಟ್ಟಿದ್ದ ಮುಖ್ಯ ಉಪಸಂಪಾದಕರೇ ನಾಗೇಶರಾಯರ ಹತ್ತಿರ ಅಲವತ್ತುಕೊಂಡಿದ್ದರು. ಸೂಕ್ತ ಸಮಯದಲ್ಲಿ ನಾಗೇಶರಾಯರು ಶಾ.ರಾ. ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಶಾ.ರಾ. ಸುಮ್ಮನಾಗಿದ್ದರು. ಹೀಗಾಗಿ ನನಗೆ ಆ ಅಂತಿಮ ಕ್ಷಣ ಬರಲೇ ಇಲ್ಲ. ಇದು ನಾಗೇಶರಾಯರು ಸತ್ಯ, ನ್ಯಾಯಗಳನ್ನು ಎತ್ತಿ ಹಿಡಿಯುತ್ತಿದ್ದ ಪರಿ.ಕಾಫಿ, ಯಾರಿಗೆ ಬೇಡ? ಆದರೆ ನಾಗೇಶರಾವ್ ಕಾಫಿ ಕೊಡಿಸ್ತಾರೆ ಅಂದ್ರೆ ನಾವೆಲ್ಲ ಹಿಂಜರೀತಿದ್ದೆವು.ನಮ್ಮಲ್ಲೊಬ್ಬ ವರದಿಗಾರರಿದ್ದರು. ಬಾಲಿಶ ಪ್ರವೃತ್ತಿ ಇನ್ನೂ ಹೋಗಿರದಿದ್ದುದರಿಂದ ‘ಬಾಲಕ’ ಎಂಬ ಅಡ್ಡ ಹೆಸರು ಅವನಿಗಂಟಿಕೊಂಡಿತ್ತು. ಶಾ.ರಾ. ಅವರ ‘ನೀಲಿ ಕಣ್ಣಿನ ಹುಡುಗ’ ಆತ. ಕಚೇರಿಗೆ ಬಂದೊಡನೆ ವರದಿ ಬರೆಯುವ ಮುನ್ನ ತಾನು ವರದಿ ಮಾಡಲು ಹೋದ ಸಮಾರಂಭದ ಆಗುಹೋಗುಗಳ ರನ್ನಿಂಗ್ ಕಾಮೆಂಟರಿ ಕೊಡುವುದು ಆತನ ಚಟ. ಸಂಪಾದಕೀಯ ಕೊಠಡಿಯಲ್ಲಿ ಇದೊಂದು ಅಸಹನೀಯ ತಲೆನೋವಾಗಿತ್ತು. ವರದಿ ಬರೆದು ಕೊಟ್ಟು ಮನೆಗೆ ಹೋಗಬಾರದೆ? ಎಂದು ಗೊಣಗಿಕೊಳ್ಳುತ್ತಿದ್ದೆವು. ಇಂಥ ಸಂದರ್ಭಗಳಲ್ಲಿ ನಾಗೇಶರಾವ್ ಈ ಬಗೆಯ ‘ತುಡುಗು’ ವರದಿಗಾರರನ್ನು ಹಾದಿಗೆ ತರುತ್ತಿದ್ದ ರೀತಿಯನ್ನು ನಾನು ಮರೆಯಲಾರೆ.ನಮಗೆಲ್ಲರಿಗೂ ತೊಂದರೆಯಾಗುತ್ತಿದೆಯೆಂಬುದು ನಾಗೇಶರಾಯರ ಗಮನಕ್ಕೆ ಬಂದೊಡನೆ, ಆ ‘ತುಡುಗು’ ವರದಿಗಾರನನ್ನು ನಾಗೇಶರಾಯರು ತಮ್ಮ ಮೇಜಿನ ಬಳಿಗೆ ಕರೆಯುತ್ತಿದ್ದರು. ‘ಬನ್ನಿ, ನೀವು ಕಾಫಿ ಕುಡಿದೇ ಇಲ್ಲ. ಹೀಗೆ ಒಂದೇ ಸಮನೆ ಕೆಲಸ ಮಾಡಿದರೆ ಹೇಗೆ’? ಎಂದು ತೆಪ್ಪಗೆ ಕೂಡಿಸಿಕೊಂಡುಬಿಡುತ್ತಿದ್ದರು. ಕಾಫಿ ಬರುವವರೆಗೂ ಆ ಮನುಷ್ಯ ಬಾಯಿ ಮುಚ್ಚಿಕೊಂಡು ಅವರ ಮುಂದೆ ಕುಳಿತಿರುತ್ತಿದ್ದ. ಡಬ್ಬಲ್ ಶುಗರ್ ಕಾಫಿ ಬಂದು ಆತ ಕುಡಿದದ್ದೇ ತಡ ‘ಆಯಿತು, ನೀವಿನ್ನು ವರದಿ ಬರೆದು ಕೊಟ್ಟು ಹೋಗಿ’ ಎನ್ನುತ್ತಿದ್ದರು ನಾಗೇಶರಾಯರು. ನಮಗೆ ಆಶ್ಚರ್ಯ. ಶಾ.ರಾ.ರಿಗೂ ಬಗ್ಗದ ಆ ‘ತುಡುಗು ದನ’ಕ್ಕೆ ಇವರು ಮೂಗುದಾರ ಹಾಕಿದ್ದು ಹೇಗೆ? ಇದಕ್ಕೆ ನಾಗೇಶರಾವ್ ಉತ್ತರ: ‘ಚಿಲ್ಡ್ರೆನ್ ಲೈಕ್ ಮೋರ್ ಶುಗರ್’.ಈಗಿನ ಹಾಗೆ, ಆಗ ಪತ್ರಿಕಾ ಕಚೇರಿಗಳಲ್ಲಿ ಉಪಸಂಪಾದಕರು ಬರೆದುದ್ದಕ್ಕೆಲ್ಲಾ ಮಣೆ ಹಾಕುತ್ತಿರಲಿಲ್ಲ. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ದಿನಗಳವು. ಶರಾವತಿ ಯೋಜನೆ ಭ್ರಷ್ಟಾಚಾರದ ಬಗ್ಗೆ ಹುಯಿಲೋ, ಹುಯಿಲು. ಆಗ, ನಾನೊಂದು ‘ವಿಡಂಬನೆ’ ಬರೆದು ‘ಪ್ರಕಟಣೆಗಾಗಿ’ ಎಂದು ನಾಗೇಶರಾಯರ ಕೈಯ್ಯಲ್ಲಿಟ್ಟೆ. ಎರಡೇ ದಿನಗಳಲ್ಲಿ ‘ಚೆನ್ನಾಗಿದೆ - ಪ್ರಕಟಿಸಲು ಸಾಧ್ಯವಿಲ್ಲ’ ಎಂಬ ಷರಾದೊಂದಿಗೆ ನಾಗೇಶರಾಯರು ಅದನ್ನು ನನಗೆ ಹಿಂದಿರುಗಿಸಿದರು.ನಂತರ, ನಾನು ಅದನ್ನು ‘ವಿನೋದ’ ಹಾಸ್ಯ ಮಾಸಿಕ ಪತ್ರಿಕೆಗೆಂದು ಸಂಪಾದಕ ಜಿ.ನಾರಾಯಣ ಅವರ ಕೈಯ್ಯಲ್ಲಿಟ್ಟೆ. ನಾರಾಯಣ ಆ ಕಾಲಕ್ಕೆ ಸಕ್ರಿಯ ಕಾಂಗ್ರೆಸ್ ಸದಸ್ಯರು. ಆದರೂ ಆ ವಿಡಂಬನೆ ‘ವಿನೋದ’ದಲ್ಲಿ ಪ್ರಕಟವಾಯಿತು.ಅದನ್ನು ಓದಿದ್ದ ನಾಗೇಶರಾವ್ ತಾವೇ ಬಂದು ನನ್ನ ಕೈಕುಲುಕೆ ‘ನಿಮ್ಮ ಬರವಣಿಗೆ ನನಗಿಷ್ಟವಾಯಿತು. ಆದರೂ ತುಂಬಾ ತೀಕ್ಷ್ಣವಾದ ವಿಡಂಬನೆ. ಜಿ.ನಾರಾಯಣರ ಧೈರ್ಯವನ್ನು ನಾನು ಮೆಚ್ಚುತ್ತೇನ್’ ಎಂದರು.ನಾಗೇಶರಾವ್ ಸ್ವತಃ ಸದಭಿರುಚಿಯ ಸಾಹಿತ್ಯದಲ್ಲಿ ಒಲವುಳ್ಳ ಲೇಖಕರಾಗಿದ್ದರು. ನಾಟಕ, ಕಾದಂಬರಿ, ನಗೆಬರಹ ಮೊದಲಾದ ಪ್ರಕಾರಗಳಲ್ಲಿ ಪ್ರಯೋಗ ಮಾಡಿದ್ದರು. ಅವರ ನಗೆ ಬರಹಗಳ ಒಂದೆರಡು ಸಂಕಲನಗಳೂ ಪ್ರಕಟವಾಗಿದ್ದವು. ಎಲ್ಲ ಪತ್ರಕರ್ತರಿಗಾಗುವಂತೆ, ವೃತ್ತಿಯ ಭರಾಟೆಯಿಂದ ಅವರೊಳಗಿನ ಲೇಖಕ ಹೆಚ್ಚು ಪ್ರಕಾಶಕ್ಕೆ ಬರಲೇ ಇಲ್ಲ.ಹೀಗೊಂದು ದಿನ ‘ಸಂಕ’ ದಾಟಿ ನಾನೂ ಎಂ.ಜಿ.ರೋಡ್ ತಲುಪಿದೆ. ಆದರೆ ನನ್ನ ಈ ಸಂಕ ದಾಟುವಿಕೆಯ ಹಂತ ಅಷ್ಟೇನೂ ಹಿತಕರವಾಗಿರಲಿಲ್ಲ. ನನ್ನ ರಾಜೀನಾಮೆ ಪತ್ರ ನೋಡಿದ್ದೇ ತಡ, ಶಾ.ರಾ. - ‘ರಂಗನಾಥ ರಾವ್, ಇಫ್ ಐ ಮೈಂಡ್ ಐ ಕೆನ್ ಮೇಕು ಯುವರ್ ಕೆರಿಯರ್ ಆರ್ ಮಾರ್ ಯುವರ್ ಕೆರಿಯರ್ .. ಹೋಗು ಕೆಲಸ ಮಾಡು ಹೋಗು ...’ - ಹೀಗೆ ಹೇಳುವಾಗ ಅವರು ಥರಥರ ಕಂಪಿಸುತ್ತಿದ್ದರು. ನಾನು ‘ಮಾರೋ ಗೋಲಿ’ ಎಂದವನೇ ಎಂ.ಜಿ.ರೋಡ್ ಸೇರಿಕೊಂಡೆ. ಹೀಗಾಗಿ ಹೊರಟು ಬರುವಾಗ ಯಾರಿಗೂ ಹೇಳಲಾಗಿರಲಿಲ್ಲ.ಮುಂದೊಂದು ದಿನ ನಾಗೇಶರಾಯರು ಸಿಕ್ಕಾಗ ಮುಗುಳ್ನಗುತ್ತಲೇ ‘ಸೋ, ಯು ಹ್ಯಾವ್ ರೀಚ್ಡ್ ಯುವರ್ ಡೆಸ್ಟಿನೇಶನ್. ಒಳ್ಳೇದಾಗಲಿ’ ಎಂದರು.

Sunday, May 03, 2009

ವಾಸ್ತವಿಕ ಪ್ರಪಂಚದ ಬಗ್ಗೆ ಕಲ್ಪನೆಯ
ಪ್ರೇಯಸಿಗೆ ಕಾಗದಗಳು!

ಸಾಧನಾ
[ಲೇಖಕರು - ನಿರಂಜನ; ಪ್ರಕಾಶಕರು - ಪುರೋಗಾಮಿ ಪ್ರಕಾಶನ, ಬಸವನಗುಡಿ,ಬೆಂಗಳೂರು-೪; ಬೆಲೆ-ರೂ.೧-೮-೦]
ಪ್ರಚಲಿತ ಜಗತ್ತಿನಲ್ಲಿ - ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ಹೆಸರಾದ ಶ್ರೀ `ನಿರಂಜನ'ರು ತಮ್ಮ ಕಲ್ಪನೆಯ (?) ಪ್ರೇಯಸಿ `ಸಾಧನಾ'ಳಿಗೆ `ಜನಪ್ರಗತಿ'ಯ ಮೂಲಕ ಕಳಿಸಿ ಕೊಟ್ಟ `ಮೇಘ ಸಂದೇಶ'ದ ಆರಿಸಿದ ಸಂಗ್ರಹ ಈ ಪುಸ್ತಕ. ಶ್ರೀ `ನಿರಂಜನ'ರ ಮೇಘ ಸಂದೇಶದಲ್ಲಿ ಪ್ರಣಯವು ವಿಚಾರ ವಿಮರ್ಶೆಯ ಎಳೆಗಳ ನಡುವೆ ಜರತಾರಿ ಅಂಚು-ಚಿತ್ರಗಳಂತೆ ಅಲ್ಲಲ್ಲಿ ಮಿ೦ಚುವುದೇ ಹೊರತು ಕೇವಲ ಪ್ರಣಯವನ್ನು ತೋಡಿಕೊಳ್ಳುವುದೇ ಅದರ ಉದ್ದೇಶವಲ್ಲ. ಯಾವುದೇ ಪ್ರಮುಖ ವಿಷಯದ ಬಗ್ಗೆ ಎಷ್ಟೇ ವಿಚಾರಪೂರಿತವೂ ಗ೦ಭೀರವೂ ಆದ ಪ್ರಬ೦ಧವನ್ನು ಬರೆದರೂ ಅದು ಎಲ್ಲಾ ಓದುಗರಿಗೂ ಹಿಡಿಸದು; ಆದರೆ ಅದಕ್ಕೆ ಪ್ರಣಯ ಪತ್ರದ ಚೌಕಟ್ಟು ಹಾಕಿದರೆ ಎ೦ತಹ ತೀವ್ರ ವಿಷಯವನ್ನಾಗಲೀ ಓದುಗರು ಆಸಕ್ತಿಯಿ೦ದ ಓದುತ್ತಾರೆ. `ಜನಪ್ರಗತಿ'ಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಈ ಪತ್ರಮಾಲೆಯೇ ಕನ್ನಡ ಓದುಗರ ಮೇಲಿನ ಈ ಸತ್ವ ಪರೀಕ್ಷೆಗೆ ಸಾಕ್ಷಿ. ಪ್ರತಿ ಯುವಕ ಯುವತಿಯೂ ಈ ಸ೦ಕಲನವನ್ನು ಆಸಕ್ತಿಯಿಟ್ಟು ಓದುವುದರಲ್ಲಿ ಸ೦ಶಯವಿಲ್ಲ.
ಶ್ರೀ `ನಿರಂಜನ'ರು ಈ ಬಗೆಯ ರಚನಾ ಕೌಶಲ್ಯದಲ್ಲಿ ಸಿದ್ಧ ಹಸ್ತರಾಗಿದ್ದಾರೆ; ಪತ್ರಿಕೆಗಳ ಯಾವ ಮೂಲೆಯಲ್ಲೋ ಸರಿಯಾಗಿ ಗಮನಕ್ಕೆ ಬಾರದೆ ಹೋದ ಎರಡು ಮೂರು ಸಾಲಿನ ಸುದ್ದಿಗಳನ್ನವರು ಎತ್ತಿ, ಅದನ್ನು ವಿಸ್ತರಿಸಿ ಅದಕ್ಕೆ ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯನ್ನು ತೋರಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕ೦ಡು ಬ೦ದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸಿದ್ದಾರೆ. ಕುತೂಹಲಕರ, ಕೋಲಾಹಲಕರ ಪ್ರಸ೦ಗ-ವಿಷಯಗಳನ್ನ೦ತೂ ಅವರು ಸು೦ದರವಾಗಿ, ಸ್ವಾರಸ್ಯವಾಗಿ `ಸಾಧನಾ'ಗೆ ವರ್ಣಿಸುವುದನ್ನು ಓದಿದಾಗ ವಾಚಕರನ್ನು ಮಾ೦ತ್ರಿಕನ ಮಾತಿಗೆ ಮುಗ್ಧರಾಗುವ ರೀತಿ ಮಾಡುವುದು. ಇ೦ತಹ ಸಿದ್ಧ ಹಸ್ತವನ್ನುಳ್ಳ ಶ್ರೀ `ನಿರ೦ಜನ'ರು ಇತ್ತೀಚಿಗೆ ಅಪಘಾತ ಒ೦ದಕ್ಕೀಡಾಗಿ ಮೂಳೆ ಮುರಿದುಕೊ೦ಡು ಮೂಕವ್ಯಥೆ ಪಟ್ಟುದನ್ನು ಈ ಸ೦ಕಲನದ ಕೊನೆಯ ಪತ್ರದಲ್ಲಿ ಓದಿದಾಗ ಕಣ್ಣಲ್ಲಿ ನೀರು ಬರುವುದು. ಆ ಹಸ್ತವನ್ನು ಕನ್ನಡಿಗರಿಗಾಗಿ ಉಳಿಸಿಕೊಟ್ಟ ಸರ್ಜನ್ ಶ್ರೀ ಕೆ. ಕೃಷ್ಣಮೂರ್ತಿಯವರಿಗೆ ಈ ಸ೦ಗ್ರಹವನ್ನು ಅರ್ಪಿಸಿರುವುದು ನ್ಯಾಯವಾಗಿಯೇ ಇದೆ.

- `ಪುಸ್ತಕಪ್ರಿಯ'
ತಾಯಿನಾಡು, ೨೮-೧೧-೧೯೫೩